ಅಪ್ಪುಗೆ ತಮಿಳು ನಟ ವಿಶಾಲ್ ಹಸಿರು ನಮನ; ತಾನು ನೆಟ್ಟ ಸಸಿಗೆ ಪುನೀತ್ ಅಂತ ನಾಮಕರಣ


ಪುನೀತ್​​ ರಾಜ್​​ಕುಮಾರ್​ ಅವರ ಅಗಲಿಕೆ ಕನ್ನಡ ಚಿತ್ರರಂಗ, ಅಭಿಮಾನಿಗಳು, ಡಾ.ರಾಜ್​ ಕುಟುಂಬಸ್ಥರು ಮಾತ್ರವಲ್ಲದೇ ಭಾರತ ಸಿನಿರಂಗಕ್ಕೆ ಬಹುದೊಡ್ಡ ಶಾಕ್​​ ನೀಡಿತ್ತು. ಸಿನಿಮಾ ರಂಗದ ಹಲವು ಸ್ಟಾರ್​ ನಟರು, ಕಲಾವಿದರು ಪುನೀತ್​ ನಿಧನಕ್ಕೆ ಸಂತಪ ಸೂಚಿಸಿ ನಮನ ಸಲ್ಲಿಸಿದ್ದರು. ಸದ್ಯ ತಮಿಳು ನಟ ವಿಶಾಲ್​ ಕೃಷ್ಣ ರೆಡ್ಡಿ ಅವರು ಗಿಡ ನೆಟ್ಟು ಪುನೀತ್​​ ಅವರಿಗೆ ನಮನ ಸಲ್ಲಿಕೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿಶಾಲ್​​, ಪುನೀತ್ ನಿರ್ವಹಿಸುತ್ತಿದ್ದ ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯವನ್ನು ತಾವು ಮುಂದುವರಿಸುವುದಾಗಿ ಹೇಳಿದ್ದರು. ವಿಶಾಲ್​ ಅವರ ಈ ಕಾರ್ಯಕ್ಕೆ ಕನ್ನಡಿಗರಾಗಿರುವ ಅವರ ತಂದೆ ಜೆ.ಕೆ ರೆಡ್ಡಿ ಕೂಡ ಸಹಕಾರ ನೀಡೋದಾಗಿ ತಿಳಿಸಿದ್ದರು.

ಇದನ್ನೂ ಓದಿ: ವಿಕ್ರಂ ಆಸ್ಪತ್ರೆಗೆ ರೆಫರ್​ ಮಾಡಿದ್ದೇ ತಪ್ಪಾಯ್ತಾ?..ಏನಂದ್ರು ಶಿವಣ್ಣ

ಈ ನಡುವೆ ತಮ್ಮ ‘ಎನಿಮಿ’ ಸಿನಿಮಾದ ಪ್ರಚಾರದಲ್ಲಿ ತೊಡಗಿರೋ ವಿಶಾಲ್​​​, ಹೈದರಾಬಾದ್​ನಲ್ಲಿ ಗಿಡ ನೆಟ್ಟು ನಮನ ಸಲ್ಲಿಕೆ ಮಾಡಿದ್ದರು. ಈ ಕುರಿತು ಟ್ವೀಟ್​ ಮಾಡಿರೋ ವಿಶಾಲ್​​, ಗ್ರೀನ್​ ಇಂಡಿಯಾ ಚಾಲೆಂಜ್​​ ಅಭಿಯಾನದಲ್ಲಿ ಭಾಗಿಯಾಗಲು ಸಂತಸವಾಗಿದೆ. ಎಷ್ಟು ಸಾಧ್ಯವೇ ಅಷ್ಟು ಗಿಡಗಳನ್ನು ಬೆಳೆಸಿ ಎಂದು ಮನವಿ ಮಾಡಿದ್ದರು. ರಾಜ್ಯ ಸಭಾ ಸದಸ್ಯರಾಗಿರುವ ತೆಲಂಗಾಣದ ಸಂತೋಷ್​ ಕುಮಾರ್ ಅವರು ಗ್ರೀನ್​ ಇಂಡಿಯಾ ಚಾಲೆಂಜ್​​ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಇದನ್ನೂ ಓದಿ: ಪುನೀತ್​​​ ನೋಡಿಕೊಳ್ಳುತ್ತಿದ್ದ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ತೀನಿ ಎಂದ ಮಗನ ಬಗ್ಗೆ ಹೆಮ್ಮೆ-ವಿಶಾಲ್ ತಂದೆ 

ಈ ವೇಳೆ ಮಾತನಾಡಿದ ವಿಶಾಲ್​​, ಸಮಾಜಕ್ಕೆ ಹಸಿರು ಅತ್ಯಗತ್ಯವಾಗಿದೆ. ಅರಣ್ಯ ಪ್ರದೇಶವನ್ನು ಹೆಚ್ಚು ಮಾಡುವ ಕಾರ್ಯ ಮಾಡಬೇಕಿದೆ. ಈ ಅಭಿಯಾನದಲ್ಲಿ ಭಾಗಿಯಾಗಲು ಅವಕಾಶ ನೀಡಿದಕ್ಕೆ ಧನ್ಯವಾದ. ಪ್ರತಿ ಭಾರೀ ಈ ಕಡೆ ಬಂದರೇ ಖಂಡಿತ ನಾನು ನೆಟ್ಟಿರುವ ಮರದ ಬಳಿ ಬಂದು ಹೋಗುತ್ತೇನೆ. ಏಕೆಂದರೆ ಮರಕ್ಕೆ ಪುನೀತ್​ ರಾಜ್​​ಕುಮಾರ್ ಅವರ ಹೆಸರಿಟ್ಟಿದ್ದೇನೆ. ಆದ್ದರಿಂದ ಏನೋ ನಾಟಿ ಮಾಡಿದ್ದೀನಿ, ಹೊರಟು ಹೋದೆ ಅಂತ ಮರೆತು ಹೋಗದೆ ನಾಟಿ ಮಾಡಿರೋ ಸಸಿಯನ್ನು ಮರವನ್ನಾಗಿ ಮಾಡುವ ಕಾರ್ಯ ಮಾಡುತ್ತೇವೆ ಎಂದು ವಿಶಾಲ್​ ಹೇಳಿದ್ದಾರೆ.

ಇದನ್ನೂ ಓದಿ: ‘ಅಪ್ಪು​​ ಆತ್ಮಕ್ಕೆ ಶಾಂತಿ ಸಿಗಲಿ ಅಂತ 1,800 ವಿದ್ಯಾರ್ಥಿಗಳ ಜವಾಬ್ದಾರಿ ತೆಗೆದುಕೊಂಡಿದ್ದೇನೆ’ ವಿಶಾಲ್​​ ಮಾತು

ಮರೆಯಾದ ಯುವರತ್ನ: ಅಪ್ಪುಗೆ ನ್ಯೂಸ್​​ಫಸ್ಟ್​ ಗೀತ ನಮನ

https://www.youtube.com/watch?v=4bxvqcmZw4o

 

News First Live Kannada


Leave a Reply

Your email address will not be published. Required fields are marked *