ಅಪ್ಪು​​​​ ನೆನೆದು ಕಣ್ಣೀರಿಟ್ಟ ನಟಿ ಆಶಿಕಾ ರಂಗನಾಥ್​​​ ಹೇಳಿದ್ದೇನು?


ಕನ್ನಡದ ಖ್ಯಾತ ನಟ ಪವರ್​​ ಸ್ಟಾರ್​​ ಪುನೀತ್​​ ರಾಜ್​​​ಕು​​ಮಾರ್​​ ಇನ್ನಿಲ್ಲ ಎಂಬ ಸುದ್ದಿಯನ್ನು ಯಾರಿಂದಲೂ ನಂಬಲು ಸಾಧ್ಯವಿಲ್ಲ. ಇಂದಿಗೂ ಪುನೀತ್​​ ರಾಜ್​​​ಕು​​ಮಾರ್​​ ಸಮಾಧಿ ನೋಡಲು ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟು ಮಂದಿ ಬೆಂಗಳೂರಿಗೆ ಬರುತ್ತಲೇ ಇದ್ದಾರೆ. ಹಲವು ಸಿನಿಮಾಗಳು ಅಪ್ಪುಗಾಗಿ ಅರ್ಪಣೆ ಮಾಡಲಾಗುತ್ತಿದೆ. ಈಗ ಅಪ್ಪು ಅಗಲಿಕೆ ನೋವಲ್ಲಿ ಆಶಿಕಾ ರಂಗನಾಥ್ ಕಣ್ಣೀರಿಟ್ಟಿದ್ದಾರೆ.

ನ್ಯೂಸ್​​ಫಸ್ಟ್​​ ಜತೆ ಮಾತಾಡಿದ ಆಶಿಕಾ ರಂಗನಾಥ್, ನಾನು ಪವರ್​​ ಸ್ಟಾರ್​​ ಅವರೊಂದಿಗೆ ಸ್ಕ್ರೀನ್​​ ಶೇರ್​​ ಮಾಡೋ ಅವಕಾಶ ಕಳೆದುಕೊಂಡೆ. ಪುನೀತ್​​ ಸಾರ್​ ಜತೆ ಕಾಲ ಕಳೆಯುವ ಆಸೆ ಕನಸಾಗಿಯೇ ಉಳಿದಿದೆ. ಇದುವರೆಗೂ ಅಪ್ಪು ಸಾರ್​​​ ಅವರನ್ನು ಒಮ್ಮೆಯೂ ಭೇಟಿ ಮಾಡಿಲ್ಲ ಎಂದು ಗಳಗಳನೇ ಅತ್ತಿದ್ದಾರೆ. ದ್ವಿತ್ವ ಚಿತ್ರದಲ್ಲಿ ಅಪ್ಪು ಜೊತೆ ಸ್ಕ್ರೀನ್ ಶೇರ್ ಮಾಡಲು ಉತ್ಸುಕರಾಗಿದ್ದರು ಅಶಿಕಾ.

News First Live Kannada


Leave a Reply

Your email address will not be published. Required fields are marked *