ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ನುಡಿ ನಮನ ಇನ್ನೇನು ಶುರುವಾಗಲಿದೆ. ನಗರದ ಗಾಯತ್ರಿ ವಿಹಾರ್ ಮೈದಾನದ ಮಂಟಪದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕಾಲಿವುಡ್, ಬಾಲಿವುಡ್, ಟಾಲಿವುಡ್ ಗಣ್ಯರ ದಂಡೇ ಆಗಮಿಸಿದೆ. ಈ ಸಂಬಂಧ ಮಾತಾಡಿದ ಕಾರ್ಯಕ್ರಮದ ರೂವಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಅವರು, ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತೆ ಎಂದರು.
ನಾಗೇಂದ್ರ ಪ್ರಸಾದ್ ಹಾಡಿನ ಮೂಲಕ ಚಾಲನೆಯಾಗುತ್ತೆ. ಮೈಸೂರಿನ ಶಕ್ತಿಧಾಮದ ಮಕ್ಕಳು ಹಾಡು ಹಾಡುತ್ತಾರೆ. ಒಟ್ಟು 3 ಗಂಟೆಗಳ ಕಾಲ ಕಾರ್ಯಕ್ರಮ ನಡೆಸಲಾಗುತ್ತೆ. ತಮಿಳು ನಟ ವಿಶಾಲ್, ತೆಲುಗು ನಟರಾದ ಜಗಪತಿ ಬಾಬು, ಶ್ರೀಕಾಂತ್, ಅಲಿ ಭಾಗಿಯಾಗಲಿದ್ದಾರೆ ಎಂದರು.
ಇದನ್ನೂ ಓದಿ: ರಾಘಣ್ಣನ ಪ್ರೀತಿಯಿಂದ ತಬ್ಬಿ ಸಂತೈಸಿದ ಬಹುಭಾಷಾ ನಟ ಪ್ರಕಾಶ್ ರೈ
The post ಅಪ್ಪು ನುಡಿ ನಮನ: ಯಾವ್ಯಾವ ಸ್ಟಾರ್ಸ್ ಬರಲಿದ್ದಾರೆ ಎಂಬ ಮಾಹಿತಿ ನೀಡಿದ ಸಾರಾ ಗೋವಿಂದು appeared first on News First Kannada.