ಅಪ್ಪು ಸರ್​ ಎಲ್ಲಿಯೂ ಹೋಗಿಲ್ಲ ನಮ್ಮ ಹೃದಯದಲ್ಲಿಯೇ ಇದ್ದಾರೆ -ಅನುಶ್ರೀ


ನಟ ಪುನೀತ್ ರಾಜ್‍ಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನ ಅಗಲಿ ಇಂದಿಗೆ 11 ದಿನ. ಅವರು ಇಲ್ಲ ಅನ್ನೋದೆ ಇಂದಿಗೂ ಜನರಿಗೆ ನಂಬಲಿಕೆ ಆಗ್ತಿಲ್ಲ. ಇವತ್ತು ಡಾ.ರಾಜ್​ ಕುಟುಂಬಸ್ಥರು ಕಠೀರವ ಸ್ಟುಡಿಯೋದಲ್ಲಿ 11 ನೇ ದಿನದ ಕಾರ್ಯವನ್ನ ನೆರವೇರಿಸಿದ್ದಾರೆ.

ಇದನ್ನೂ ಓದಿ: ‘ಹೊಸ ಪ್ರತಿಭೆಗಳಿಗೆ ಅವಕಾಶ ನೀಡ್ಬೇಕು ಅಂತಿದ್ರು’ -ಅಪ್ಪು ಸಮಾಧಿ ಮೇಲೆ ಕೈ ಇಟ್ಟು ಕುಳಿತ ಸಿದ್ದಾರ್ಥ್​

ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯದಲ್ಲಿ ನಿರೂಪಕಿ ಅನುಶ್ರೀ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ಪು ಅವರು ಎಲ್ಲಿಯೂ ಹೋಗಿಲ್ಲ.. ಈ ಕ್ಷಣದಲ್ಲಿ ನನಗೆ ಮಾತುಗಳೇ ಬರ್ತಿಲ್ಲ. ಅಪ್ಪು ಸರ್​ ಯಾವತ್ತು ಯಾರನ್ನು ದ್ವೇಷಿಸಿಲ್ಲ. ಎಲ್ಲರನ್ನೂ ಪ್ರೀತಿಯಿಂದಲೇ ಕಂಡವರು. ಹೀಗಾಗಿ ನಾವು ಎಲ್ಲರನ್ನು ಪ್ರೀತಿಸಿ ನಗು ನಗುತ್ತಾ ಇದ್ದರೆ ಪುನೀತ್​ ಅವರು ನಮ್ಮ ಹೃದಯದಲ್ಲೇ ಇರ್ತಾರೆ ಎಂದರು..

 

News First Live Kannada


Leave a Reply

Your email address will not be published. Required fields are marked *