
ಹಾಸನದ ಯುವಕರ ತಂಡ
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಗಡಿಗಳ ದರ್ಶನ ಮಾಡೋ ಮಹದಾಸೆಯೊಂದಿಗೆ ಜಿಲ್ಲೆಯ 15 ಜನರ ಯುವ ಉತ್ಸಾಹಿ ಯುವಕರು ಪ್ರಯಾಣ ಆರಂಭಿಸಿದ್ದಾರೆ.
ಹಾಸನ: ದೇಶಾಭಿಮಾನಕ್ಕಾಗಿ ಹಾಸನದ ಯುವಕರ ತಂಡವೋಂದು ವಿಭಿನ್ನ ಸಾಹಸಕ್ಕೆ ಕೈ ಹಾಕಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ದಿ ಆಫ್ ಬೀಟ್ ಎಕ್ಸಪ್ಲೋರರ್ ಹೆಸರಿನ ಬೈಕ್ ರೇಡರ್ಗಳು ಬರೊಬ್ಬರಿ 7 ಸಾವಿರ ಕಿಲೋಮೀಟರ್ ಬೃಹತ್ ಪ್ರವಾಸವನ್ನ ಬೈಕ್ನಲ್ಲಿ ಹೊರಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಗಡಿಗಳ ದರ್ಶನ ಮಾಡೋ ಮಹದಾಸೆಯೊಂದಿಗೆ ಜಿಲ್ಲೆಯ 15 ಜನರ ಯುವ ಉತ್ಸಾಹಿ ಯುವಕರು ಪ್ರಯಾಣ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ವೈದ್ಯವೃತ್ತಿ, ಇಂಜಿನಿಯರ್, ಬ್ಯುಸಿನೆಸ್ ಹೀಗೆ ಬೇರೆ ಬೇರೆ ಕೆಲಸ ಮಾಡಿಕೊಂಡಿರೋ ಸಾಹಸಿಗರು ಒಟ್ಟುಗೂಡಿ ಇಂದು ಹಾಸನದಿಂದ ಪ್ರಯಾಣ ಆರಂಭಿಸಿದ್ದು 25 ದಿನಗಳು ವಿವಿದ ರಾಜ್ಯಗಳನ್ನು ಸಂಚಾರ ಮಾಡಿ ದೇಶದ ಹೆಮ್ಮೆಯ ತಾಣ, ಜಗತ್ತಿನ ಅತಿ ಎತ್ತರದ ರಸ್ತೆ ಉಮ್ಮನಿಂಗಲ ಪಾಸ್ನಲ್ಲಿ ತ್ರಿವರ್ಣ ಧ್ವಜ ಹಾರಿಸೋ ಸಂಕಲ್ಪದೊಂದಿಗೆ ಪ್ರಯಾಣ ಆರಂಭಿಸಿದ್ದಾರೆ.
ಅಮೃತ ಮಹೊತ್ಸವದ ಸಂಕಲ್ಪ
ಈ ಹಿಂದೆ ದೇಶದ ಹಲವೆಡೆಗೆ ಸಾವಿರಾರು ಕಿಲೋಮೀಟರ್ ಬೈಕ್ ಪ್ರಯಾಣ ಮಾಡಿರೋ ಈ ಉತ್ಸಾಹಿ ತಂಡ ದೇಶಕ್ಕೆ ಸ್ವತಂತ್ರ್ಯ ಸಿಕ್ಕಿ 75 ವರ್ಷಗಳಾಗಿರೋ ಶುಭ ಸಂದರ್ಭದ ಸವಿನೆನಪಿನಲ್ಲಿ ಏನಾದ್ರು ವಿಭಿನ್ನವಾಗಿ ಆಚರಣೆ ಮಾಡಬೇಕು ಎನ್ನೋ ಹಂಬಲ ತುಡಿತ ಕಾಡಿತ್ತು. ಅದಕ್ಕಾಗಿ ಅವರು ಆಯ್ಕೆಮಾಡಿಕೊಂಡ ಮಾರ್ಗ ಈ ಸುದೀರ್ಘ ಯಾತ್ರೆ. ಯಾತ್ರೆ ಹೊರಡಲು ಸಿದ್ದಗೊಂಡ 15 ಜನರ ತಂಡ ಸೇರಿ ಬೃಹತ್ ಪ್ರಯಾಣಕ್ಕೆ ತಯಾರಾಗಿದ್ದರು. ಇಂದು ಮುಂಜಾನೆ ಹಾಸನದ ಎಂಜಿ ರಸ್ತೆಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೈಕ್ ಏರಿ ಪ್ರಯಾಣ ಮಾಡಿದ ತಂಡ ಇನ್ನು 25 ದಿನಗಳು ಚಕ್ರಗಳ ಮೇಲೆ ತಿರುಗುತ್ತಲೇ ಜಗತ್ತು ದರ್ಶನ ಮಾಡಲಿದ್ದಾರೆ. ಅದ್ರಲ್ಲೂ ದೇಶದ 12 ರಾಜ್ಯಗಳನ್ನ ಹಾದು ಹೋಗಲಿರೋ ಈ ಬೈಕ್ ಯಾತ್ರೆ ಆಂದ್ರ, ತೆಲಂಗಾಣ, ಮದ್ಯಪ್ರದೇಶ್, ಉತ್ತರ ಪ್ರದೇಶ್, ದೆಹಲಿ, ಹಿಮಾಚಲ ಪ್ರದೇಶ ಮೂಲಕ ಸಾಗಿ ಜಮ್ಮು ಕಾಶ್ಮೀರ ತಲುಪಲಿದೆ. ಈ ಮಾರ್ಗಗಳಲ್ಲಿ ವಾಘಾ ಬಾರ್ಡರ್, ಲಡಾಕ್ ಹಾಗೂ ಜಗತ್ತಿನ ಅತಿ ಎತ್ತರದ ರಸ್ತೆ ಸಮುದ್ರಮಟ್ಟಕ್ಕಿಂತ 19300 ಅಡಿ ಎತ್ತರದಲ್ಲಿ ನಮ್ಮ ದೇಶದ ಹೆಮ್ಮೆಯ ಸೈನಿಕರೆ ನಿರ್ಮಾಣ ಮಾಡಿರೋ ರಸ್ತೆಗೆ ತೆರಳಿ ಅಲ್ಲಿ ತ್ರಿವರ್ಣ ಧ್ವಜದ ಜೊತೆಗೆ ಕನ್ನಡ ಧ್ವಜವನ್ನು ಹಾರಿಸಬೇಕು ಎನ್ನೋದು ಈ ತಂಡ ಸಂಕಲ್ಪವಾಗಿದೆ.