ಇಂಜುರಿಗೆ ತುತ್ತಾಗಿ ಟೀಮ್ ಇಂಡಿಯಾದಿಂದ ಪ್ರಮುಖ ಆಟಗಾರರೇ ಹೊರ ಬಿದ್ದಿದ್ದಾರೆ. ಅದರ ಬೆನ್ನಲ್ಲೇ ಇವರಿಗೆಲ್ಲಾ ವಿಶ್ವಕಪ್ ಆಡೋ ಅವಕಾಶ ಬಹುತೇಕ ಅಸಾಧ್ಯ ಎನ್ನಲಾಗ್ತಿದೆ. ಆದ್ರೆ, ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಇವರೆಲ್ಲರಿಗೂ ಎಲ್ಲಾ ಉಹಾಪೋಹಗಳನ್ನ ತಳ್ಳಿ ಹಾಕಿ ಡ್ರಾಪ್ ಔಟ್ ಆದ ಆಟಗಾರರಿಗೆ ಗುಡ್ನ್ಯೂಸ್ ನೀಡಿದ್ದಾರೆ.
ನಿನ್ನೆಯಿಂದ ಆರಂಭವಾಗಿರುವ ಇಂಡೋ-ವೆಸ್ಟ್ ಇಂಡೀಸ್ ಸೀರಿಸ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದ್ರೆ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮಾತ್ರ ವಿಶ್ವಕಪ್ ಅನ್ನ ಟಾರ್ಗೆಟ್ ಮಾಡಿದೆ. ಅದಕ್ಕಾಗೇ ಈಗಿನಿಂದಲೇ ಗೇಮ್ ಪ್ಲಾನ್, ಸ್ಟಾರ್ಟಜಿಗಳನ್ನ ರೂಪಿಸ್ತಿದ್ದು, ತಂಡದ ಆಯ್ಕೆಗೆ ಈಗಿನಿಂದಲೇ ಅಡಿಪಾಯ ಹಾಕ್ತಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ ಈ ವಿಚಾರದಲ್ಲಿ ಸ್ಪಷ್ಟತೆ ಬಂದಿದ್ದು, ತಂಡದಿಂದ ಹೊರಗುಳಿದಿರೋ ಆಟಗಾರರಿಗೆ ಸಂದೇಶವೊಂದನ್ನ ರವಾನಿಸಿದ್ದಾರೆ.
ಎಲ್ಲರಿಗೂ ಮುಕ್ತವಾಗಿದೆ ಅವಕಾಶ..!
ಯೆಸ್.. ಈ ಮಾತನ್ನ ಹೇಳಿದ್ದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ. ವಿಂಡೀಸ್ ವಿರುದ್ಧದ ಟಿ20 ಸರಣಿಯ ಆರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಕಪ್ ಪ್ಲಾನಿಂಗ್ ರೋಹಿತ್ ಮಾತನಾಡಿದ್ರು. ಇದೇ ವೇಳೆ ಎದುರಾದ ಟೀಮ್ ಕಾಂಬಿನೇಷನ್ ಪ್ರಶ್ನೆಗೆ ಹಿಟ್ಮ್ಯಾನ್ ನೇರವಾದ ಉತ್ತರ ನೀಡಿದ್ದು, ಎಲ್ಲರಿಗೂ ಆಯ್ಕೆ ಮುಕ್ತವಾದ ಅವಕಾಶವಿದೆ ಎಂದಿದ್ದಾರೆ. ಈ ಮೂಲಕ ಇಂಜುರಿಗೆ ತುತ್ತಾಗಿ ತಂಡದಿಂದ ಹೊರಗಿರುವ ಆಟಗಾರರಿಗೂ ಆಯ್ಕೆಯ ಅವಕಾಶವಿದೆ ಅನ್ನೋ ಸೂಚನೆ ನೀಡಿದ್ದಾರೆ.
ಫಿಟ್ನೆಸ್ ಟೆಸ್ಟ್ ಪಾಸ್ ಆದ್ರೆ ತಂಡದಲ್ಲಿ ಸ್ಥಾನ ಫಿಕ್ಸ್
ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶುಭ್ಮನ್ ಗಿಲ್, ನಟರಾಜನ್ ಹೀಗೆ ಪ್ರಮುಖ ಆಟಗಾರರು ಇದೀಗ ತಂಡದಿಂದ ಹೊರಗುಳಿದಿದ್ದಾರೆ. ಇವರೆಲ್ಲಾ ಇಂಜುರಿಗೆ ತುತ್ತಾದ ಬೆನ್ನಲ್ಲೇ, ಇವರ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಅದರಲ್ಲೂ ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಹಾಟ್ ಸಬ್ಜೆಕ್ಟ್ ಆಗಿ ಮಾರ್ಪಟ್ಟಿದೆ. ಇದೀಗ ರೋಹಿತ್ ಶರ್ಮಾನೇ ಈ ಡಿಬೇಟ್ಗೆ ಬ್ರೇಕ್ ಹಾಕಿದ್ದು ಫಿಟ್ನೆಸ್ ಅಗ್ನಿ ಪರೀಕ್ಷೆ ಗೆದ್ದಿದ್ದೆ ಆದ್ರೆ, ಚಾನ್ಸ್ ಸಿಗೋ ಸಾಧ್ಯತೆ ಹೆಚ್ಚಿದೆ.
ಫಿಟ್ನೆಸ್ ಮಾತ್ರವಲ್ಲ ಫಾರ್ಮ್ ಕೂಡ ನಿರ್ಣಾಯಕ..!
ಫಿಟ್ನೆಸ್ ಮಾತ್ರವಲ್ಲ.. ಫಾರ್ಮ್ ಕೂಡ ಇಲ್ಲಿ ನಿರ್ಣಾಯಕವಾಗಲಿದೆ. ತಮ್ಮ ಸಾಮರ್ಥ್ಯವನ್ನ ನಿರೂಪಿಸಿ ಆಯ್ಕೆಗಾರರನ್ನ ಇಂಪ್ರೆಸ್ ಮಾಡಲೇಬೇಕಿದೆ. ಇದಕ್ಕಿರೋ ಉತ್ತಮ ವೇದಿಕೆ ಅಂದ್ರೆ, ಅದು ಮಾರ್ಚ್ನಿಂದ ಅಂತ್ಯದಿಂದ ಆರಂಭವಾಗಲಿರೋ ಐಪಿಎಲ್. ಈ ಬಿಲಿಯನ್ ಡಾಲರ್ ಟೂರ್ನಿಯಲ್ಲಿ ಅಬ್ಬರಿಸಿ, ಫಿಟ್ನೆಸ್ ಅಗ್ನಿಪರೀಕ್ಷೆಯನ್ನೂ ಗೆದ್ರೆ ಮಾತ್ರ, ಅವಕಾಶ ಸಿಗಲಿದೆ.
ಒಟ್ಟಿನಲ್ಲಿ ರೋಹಿತ್ ಶರ್ಮಾ ಎಲ್ಲರಿಗೂ ವಿಶ್ವಕಪ್ ಆಡೋ ಅವಕಾಶವಿದೆ ಅನ್ನೋ ಸಂದೇಶವನ್ನೆನೋ ರವಾನಿಸಿದ್ದಾರೆ. ಆದ್ರೆ, ವಿಶ್ವಕಪ್ಗೆ ಇನ್ನು ಕೆಲವೇ ಕೆಲವು ತಿಂಗಳುಗಳು ಮಾತ್ರ ಉಳಿದಿರುವ ಈ ಸಂದರ್ಭದಲ್ಲಿ ಫರ್ಪೆಕ್ಟ್ ಪ್ಲೇಯಿಂಗ್ ಇಲೆವೆನ್ ಫಿಕ್ಸ್ ಮಾಡೋದ್ರ ಬದಲು, ಪ್ರಯೋಗಕ್ಕೆ ಟೀಮ್ ಇಂಡಿಯಾ ಮುಂದಾಗ್ತಿದೆ. ಈ ನಡೆ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆಯೂ ಇಲ್ಲಿ ಹುಟ್ಟಿದೆ.