ದಕ್ಷಿಣ ಕನ್ನಡ : ಆಂಬ್ಯುಲೆನ್ಸ್ ಗೆ 40 ಕಿಲೋಮೀಟರ್ ವರೆಗೂ ದಾರಿ ಬಿಡದೆ ಕಾರು ಸವಾರನೋರ್ವ ಸತಾಯಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನಿಂದ ಭಟ್ಕಳಕ್ಕೆ ರೋಗಿಯನ್ನ ಆಂಬುಲೆನ್ಸ್ ನಲ್ಲಿ ಹೈಬು ಎಂಬ ಡ್ರೈವರ್ ಕರೆದುಕೊಂಡು ತೆರಳುತ್ತಿದ್ದ. ಈ ವೇಳೆ ಮಂಗಳೂರು ರಿಜಿಸ್ಟ್ರೇಷನ್ನ ಕಾರಿನ ಚಾಲಕ, ಮುಲ್ಕಿಯಿಂದ ಉಡುಪಿವರೆಗೆ ಬರೋಬ್ಬರಿ 40 ಕಿಲೋ ಮೀಟರ್ ದಾರಿ ಬಿಡದೆ ಸತಾಯಿಸಿದ್ದಾನೆ. ಇನ್ನು ಇಷ್ಟೇ ಅಲ್ಲದೆ ರಾತ್ರಿ ಮಣಿಪಾಲದಿಂದ ಮಂಗಳೂರಿಗೆ ಹೊರಟಿದ್ದ ಮತ್ತೊಂದು ಆಂಬುಲೆನ್ಸ್ಗೂ ಕೂಡ ಈ ಕಾರ್ ಚಾಲಕ ಸತಾಯಿಸಿದ್ದಾನೆ.