ಆಟೋ-ಲಾರಿ ಮಧ್ಯೆ ಭೀಕರ ಅಪಘಾತ; 2.5 ತಿಂಗಳ ಮಗು ಸೇರಿ ಸ್ಥಳದಲ್ಲೇ ಮೂವರ ದುರ್ಮರಣ


ಯಾದಗಿರಿ: ಲಾರಿ-ಆಟೋ ನಡುವೆ ಭೀಕರ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಗರದ ಹೊರಭಾಗದ ಮುದ್ನಾಳ ಕ್ರಾಸ್ ಬಳಿ ನಡೆದಿದೆ.

ಕಂಚಗಾರಹಳ್ಳಿ ತಾಂಡಾದ ನಿವಾಸಿ ಲಕ್ಷ್ಮಣ , ಹೊತಪೇಟ ತಾಂಡಾ ನಿವಾಸಿ ಜಯರಾಮ ಹಾಗೂ ಎರಡೂವರೆ ತಿಂಗಳ ಗಂಡು ಮಗು ಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದೆ. ದುರ್ಘಟನೆಯಲ್ಲಿ ಆರು ಪ್ರಯಾಣಿಕರಿಗೆ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಬೈನಿಂದ ಟ್ರೈನ್ ಮೂಲಕ ಬಂದು ಅಟೋದಲ್ಲಿ ಊರಿಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಕಲಬುರಗಿಯಿಂದ ಯಾದಗಿರಿ ಕಡೆ ಲಾರಿ ಬರುತ್ತಿತ್ತು. ಘಟನಾ ಸ್ಥಳಕ್ಕೆ ಯಾದಗಿರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *