‘ಆ ವ್ಯಕ್ತಿಯಿಂದ ನಿರಂತರ ಸೋಲಾಗ್ತಿದೆ’ ಹೇಳಿಕೆ ಬೆನ್ನಲ್ಲೇ ಸತೀಶ್​ ವಿರುದ್ಧ ವಿರೋಧಿ ಬಣ ಌಕ್ಟಿವ್


ಬೆಳಗಾವಿ: ಬೆಳಗಾವಿಯ ಆ ಒಬ್ಬ ನಾಯಕನಿಂದ ಕಾಂಗ್ರೆಸ್​ಗೆ ನಿರಂತರ ಸೋಲಾಗಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಹೇಳಿಕೆ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷರ ವಿರುದ್ಧ ಸತೀಶ್​ ವಿರೋಧಿ ಬಣ ಆಕ್ಟೀವ್ ಆಗಿದೆ ಎನ್ನಲಾಗಿದೆ.

ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬೆಳಗಾವಿ ಪರಾಜಿತ ಮಾಜಿ ಶಾಸಕರ ಬೆಂಬಲಿಗರಿಂದ ಮಹಾಂತೇಶ ನಗರದ ಖಾಸಗಿ ಹೊಟೇಲ್ ನಲ್ಲಿ ಸಭೆ ನಡೆಸಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಸಭೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬೆಂಬಲಿಗರು ಭಾಗಿಯಾಗಿದ್ದು ಈ ಕುರಿತು ಹೈಕಮಾಂಡ್ ಗೆ ದೂರು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸಭೆಯಲ್ಲಿ ಚರ್ಚೆಯಾಗಿವೆ ಎನ್ನಲಾದ ವಿಷಯಗಳು

  • 2008ರಲ್ಲಿ ಸತೀಶ್ ಜಾರಕಿಹೊಳಿ ಜೆಡಿಎಸ್ ನಿಂದ ಕಾಂಗ್ರೆಸ್ ಬಂದ ನಂತರ ಕಾಂಗ್ರೆಸ್ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.
  • ಜಿಲ್ಲೆಯ ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದ ನಾಯಕರನ್ನ ಉದ್ದೇಶಪೂರ್ವಕವಾಗಿ ಸೋಲಿಸಿದ್ದಾರೆ.
  • ತಮ್ಮ ಬೆಂಬಲಿಗರಿಗೆ ಕಾಂಗ್ರೆಸ್ ನಲ್ಲಿ ಅವಕಾಶ ನೀಡಿ ಪ್ರಮಾಣಿಕ ಕಾರ್ಯಕರ್ತರನ್ನ ಹೊರಗಿಟ್ಟಿದ್ದಾರೆ.
  • 2023ರ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿಗೆ ನೀಡಿದರೆ ಕಾಂಗ್ರೆಸ್ ಇನ್ನಷ್ಟು ಹೀನಾಯ ಸ್ಥಿತಿ ತಲುಪಲಿದೆ ಈ ಕುರಿತು ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್​ ಹಾಗೂ ಸೋನಿಯಾ ಗಾಂಧಿಗೆ ಈ ಕುರಿತು ದೂರು ನೀಡಲು ನಿರ್ಧಾರ.

ಇದನ್ನೂ ಓದಿ: ಆ ಒಬ್ಬ ವ್ಯಕ್ತಿಯಿಂದ ನಿರಂತರ ಸೋಲಾಗ್ತಿದೆ, ಅದ್ಕೆ ನಾನೇ ರಂಗ ಪ್ರವೇಶ ಮಾಡ್ತೇನೆ- ಸತೀಶ್ ಆಕ್ರೋಶ

News First Live Kannada


Leave a Reply

Your email address will not be published. Required fields are marked *