ಇಂಡಿಯಾ ವಿರುದ್ಧ ಅಫ್ಘಾನ್​​ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ರಶೀದ್​ ಖಾನ್


ICC T20 ವಿಶ್ವಕಪ್​​​ ಪಂದ್ಯದಲ್ಲಿ ಟೀಮ್​ ಇಂಡಿಯಾ ಎದುರು ಅಫ್ಘಾನಿಸ್ತಾನ 66 ರನ್​​​ಗಳ ಸೋಲನುಭವಿಸಿದೆ. ಆದರೆ ಈ ಸೋಲಿಗೆ ಅಸಲಿ ಕಾರಣ ಏನೆಂಬುದನ್ನು ಅಫ್ಘಾನ್​​​ ತಂಡದ ಸ್ಪಿನ್ನರ್​​ ರಶೀದ್​ ಖಾನ್​ ವಿವರಿಸಿದ್ದಾರೆ.

ಮೊದಲೆರಡು ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಕಳಪೆ ಪ್ರದರ್ಶನ ನೀಡಿತ್ತು. ಮೊದಲ ಬ್ಯಾಟಿಂಗ್​​ ಟೀಮ್​ ಇಂಡಿಯಾಗೆ ಬ್ಯಾಟಿಂಗ್​​​ ಮಾಡುವುದು ಕಷ್ಟವಾಗಬಹುದು ಎಂದು ನಿರ್ಧರಿಸಿದ್ದೆವು. ಇದರಿಂದಾಗಿಯೇ ಬ್ಯಾಟಿಂಗ್​​ ಬದಲು ಬೌಲಿಂಗ್​ ಆಯ್ಕೆ ಮಾಡಿಕೊಂಡೆವು. ಆದರೆ ನಮ್ಮ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾದವು ಎಂದು ಹೇಳಿದ್ದಾರೆ.

ವೈಫಲ್ಯ ಅನುಭವಿಸಿದ್ದ ಭಾರತದ ಬ್ಯಾಟರ್​​​ಗಳ ಮೇಲೆ ದಾಳಿ ನಡೆಸಲು ನಿರ್ಧಿರಿಸಿದ್ದೆವು. ಇದರಲ್ಲಿ ನಾವು ಯಶಸ್ವಿಯಾಗಿದ್ದರೆ ಖಂಡಿತ ಈ ಪಂದ್ಯವನ್ನು ಗೆಲ್ಲುತ್ತಿದ್ದೆವು. ಆದರೆ ಟೀಮ್​ ಇಂಡಿಯಾದ ಆಟಗಾರರು ವೃತ್ತಿಪರರು. ಅವರು ನಮ್ಮನ್ನು ಪಂದ್ಯದ ಯಾವುದೇ ಹಂತದಲ್ಲಿ ಮರಳುವುದಕ್ಕೆ ಬಿಡಲಿಲ್ಲ ಎಂದರು.

ಇದನ್ನೂ ಓದಿ: ‘ಹೀಗೆ ಮಾಡಿದ್ರೆ ಮಾತ್ರ ಟೀಂ ಇಂಡಿಯಾ ಗೆಲ್ಲಲು ಸಾಧ್ಯ’- ಸೆಹ್ವಾಗ್​​ ಕೊಟ್ಟ ಸಲಹೆಯೇನು?

News First Live Kannada


Leave a Reply

Your email address will not be published. Required fields are marked *