ದಾವಣಗೆರೆ: ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಅಜ್ಜಿಯೊಬ್ಬರು ಹೈಡ್ರಾಮಾ ನಡೆಸಿದ್ದು ತಹಶೀಲ್ದಾರ್ ಮುಂದೆಯೇ ಮೈಮೇಲೆ ದೇವರು ಬಂದಿದೆ ಅಂತ ಪಟ್ಟು ಹಿಡಿದು ಲಸಿಕೆ ಹಾಕಿಸಿಕೊಳ್ಳುಲು ನಿರಾಕರಿಸಿದ ಘಟನೆ ತಾಲೂಕಿನ ಕೈದಾಳೆ ಗ್ರಾಮದಲ್ಲಿ ನಡೆದಿದೆ.
ಮೊನ್ನೆ ಗ್ರಾಮದ ಅಜ್ಜಿ ಯೊಬ್ಬರು ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿ ಮುಂದೆ ಮೇಲೆ ದೇವರು ಬಂದಿದೆ ಅಂತ ಹೇಳಿ ವ್ಯಾಕ್ಸಿನ್ ತೆಗೆದುಕೊಳ್ಳಲು ನಿರಾಕರಿಸಿದ್ದರು. ಈ ವಿಡಿಯೋ ಸುದ್ದಿ ವಾಹಿನಿಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ತಹಶೀಲ್ದಾರ್ ಖುದ್ದು ಅಜ್ಜಿ ಮನೆಗೆ ಲಸಿಕೆ ಪಡೆಯುವಂತೆ ಮನವೊಲಿಸಲು ಬಂದಿದ್ದಾರೆ.
ಈ ವೇಳೆ ಅಜ್ಜಿ ಮತ್ತೆ ತಮ್ಮ ವರಸೆಯನ್ನ ಮುಂದುವರೆಸಿದ್ದು ಏಕವಚನದಲ್ಲಿಯೇ‘ಬಾ ಮಗನೇ ಬಾ, ನಿನ್ನನ್ನ ನನ್ನ ಮಡಿಲಲ್ಲಿ ಹಾಕಿಕೊಳ್ತೀನಿ, ನಿನಗೆ ಒಂದು ಗುರಿಯಿದೆ, ಆ ಗುರಿಗೆ ನಾನು ಬಾಣ ಹೊಡೆಯುತ್ತೇನೆ. ನನ್ನ ಕೈಗೆ ನೀನು ಸೂಜಿ ಹಾಕಲು ಬಂದಿದ್ದಿಯಾ.. ನಿನಗೆ ನಿನ್ನ ಬಲಗೈ ಬೇಕೋ ಬೇಡ್ವೋ’ ಎಂದು ಅಜ್ಜಿ ಆವಾಜ್ ಹಾಕಿದ್ದಾರೆ.
ಇದನ್ನೂ ಓದಿ:ಒಮಿಕ್ರಾನ್ ಬಗ್ಗೆ 3 ಆತಂಕಕಾರಿ ಮಾಹಿತಿ ಬಿಚ್ಚಿಟ್ಟ ವೈದ್ಯರು -ಭಾರತಕ್ಕೆ ಭಯ ಕಾಡ್ತಿರೋದು ಯಾಕೆ ಗೊತ್ತಾ..?
ಈ ವೇಳೆ ಅಜ್ಜಿಗೆ ಮರು ಉತ್ತರಿಸಿದ ತಹಶೀಲ್ದಾರ್ ‘ದೇವಿ ನಿನ್ನೆ ನನ್ನ ಕನಸಿನಲ್ಲಿ ಬಂದಿದ್ದಳು. ನಿನಗೆ ಲಸಿಕೆ ಹಾಕಿಸಬೇಕು ಅಂತ ದೇವಿ ಆಜ್ಞೆಯಿದೆ’ ಎಂದಿದ್ದಾರೆ. ಅದಕ್ಕೂ ಅಜ್ಜಿ ಒಪ್ಪದಿದ್ದಾಗ ಸಾಕಷ್ಟು ಹೊತ್ತಿನ ಬಳಿಕ ಮನವೊಲಿಕೆ ಮಾಡಿ ಲಸಿಕೆ ಹಾಕಿ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ಬಿರುಕು ಬಿಟ್ಟ ಪಿಕಪ್ ಡ್ಯಾಮ್; ಜನರಲ್ಲಿ ಹೆಚ್ಚಿದ ಆತಂಕ
The post ಇಂದೂ ದೆವ್ವ ಬಂದಂತೆ ಹೈಡ್ರಾಮಾ; ಕೊನೆಗೂ ತಹಶೀಲ್ದಾರ್ ಐಡಿಯಾಗೆ ಸೋತು ಲಸಿಕೆ ಹಾಕಿಸಿಕೊಂಡ ಅಜ್ಜಿ..! appeared first on News First Kannada.