ಮುಂಬರುವ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪೂಜಾರ – ರಹಾನೆಗೆ ಜಾಗವಿಲ್ಲ. ಹಾಗೆಂದ ಮಾತ್ರಕ್ಕೆ ಇದನ್ನ ಟೆಸ್ಟ್ ಸ್ಪೆಷಲಿಸ್ಟ್ಗಳ ಪಾಲಿಗೆ ಟೀಮ್ ಇಂಡಿಯಾದ ಬಾಗಿಲು ಮುಚ್ಚಿತು ಎಂದೂ ಹೇಳುವಂತಿಲ್ಲ. ಯಾಕಂದ್ರೆ ಇವರಿಗೆ ಅಂತಾ ಬಿಸಿಸಿಐ ವಿಶೇಷ ಪ್ಲಾನ್ ರೂಪಿಸಿದೆ.
ಅಜಿಂಕ್ಯಾ ರಹಾನೆ – ಚೇತೇಶ್ವರ್ ಪೂಜಾರ. ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಸ್ಪೆಷಲಿಸ್ಟ್ ಪ್ಲೇಯರ್ಗಳಾಗಿದ್ದ ಈ ಇಬ್ಬರ ಭವಿಷ್ಯ ಈಗ ಅತಂತ್ರಕ್ಕೆ ಸಿಲುಕಿದೆ. ಬ್ಯಾಡ್ ಫಾರ್ಮ್ ಹಾಗೂ ಸ್ಥಾನಕ್ಕಿರುವ ಪೈಪೋಟಿಯಲ್ಲಿ ಇಬ್ಬರೂ ಕಳೆದು ಹೋದ್ರೂ ಅಚ್ಚರಿಯಿಲ್ಲ. ಯಾಕಂದ್ರೆ, ಸೌತ್ ಆಫ್ರಿಕಾ ಸರಣಿಯ ಬಳಿಕ ಈ ಇಬ್ಬರ ಪಾಲಿಗೆ ಟೀಮ್ ಇಂಡಿಯಾದ ಬಾಗಿಲು ಮುಚ್ಚಿತು ಎಂದೇ ಹೇಳಲಾಗ್ತಿದೆ.
ಶ್ರೀಲಂಕಾ ಸರಣಿಯಿಂದ ರಹಾನೆ – ಪೂಜಾರಗೆ ಕೊಕ್.!
ಸೌತ್ ಆಫ್ರಿಕಾ ಸರಣಿಯಲ್ಲೇ ರಹಾನೆ, ಪೂಜಾರ ಬೆಂಚ್ಗೆ ಸೀಮಿತವಾಗ್ತಾರೆ ಎಂದು ಹೇಳಲಾಗಿತ್ತು. ಹಾಗಿದ್ರೂ ಆಟಗಾರರ ಮೇಲೆ ನಂಬಿಕೆ ಇಟ್ಟಿದ್ದ ಟೀಮ್ ಮ್ಯಾನೇಜ್ಮೆಂಟ್ ಅವಕಾಶಗಳನ್ನ ನೀಡಿತ್ತು. ಆದ್ರೆ, ಈ ಹಿರಿಯ ಆಟಗಾರರು ಆ ನಂಬಿಕೆಯನ್ನ ಹುಸಿಗೊಳಿಸಿದ್ರು. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಹಿನ್ನಡೆಗೆ ಕಾರಣರಾದ್ರು. ಹೀಗಾಗಿ ಈ ಇಬ್ಬರನ್ನ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಆಯ್ಕೆಗೆ ಪರಿಗಣಿಸೋದೇ ಇಲ್ಲ ಎನ್ನಲಾಗ್ತಿದೆ.
ದೇಶಿ ಅಗ್ನಿಪರೀಕ್ಷೆ ಜಯಿಸಿದ್ರೆ ಮತ್ತೆ ಸಿಗಲಿದೆ ಚಾನ್ಸ್.!
ಫಾರ್ಮ್ ಇಸ್ ಟೆಂಪರ್ವರಿ.. ಕ್ಲಾಸ್ ಇಸ್ ಫರ್ಮನೆಂಟ್..! ಅನ್ನೋ ಮಾತನ್ನ ಟೀಮ್ ಮ್ಯಾನೇಜ್ಮೆಂಟ್ ಮೊದಲಿನಿಂದಲೂ ಹೇಳುತ್ತಲೆ ಬರುತ್ತಿದೆ. ಇದೀಗ ಅದೇ ಮಾತಿಗೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಕಟ್ಟು ಬಿದ್ದಿದ್ದು, ಈ ಇಬ್ಬರಿಗೆ ಸ್ಪೆಷಲ್ ಟಾಸ್ಕ್ ನಿಡೋಕೆ ಮುಂದಾಗಿದೆ. ದೇಶಿ ಕ್ರಿಕೆಟ್ ಪಂದ್ಯಗಳನ್ನಾಡಿ ಅಲ್ಲಿ ಫಾರ್ಮ್ ರೀಗೇನ್ ಮಾಡಿಕೊಂಡು ಕಮ್ಬ್ಯಾಕ್ ಮಾಡಿ ಅನ್ನೋದು ಸಂದೇಶವಾಗಿದೆ. ಒಂದು ವೇಳೆ ದೇಶಿ ಕ್ರಿಕೆಟ್ನ ಅಗ್ನಿ ಪರೀಕ್ಷೆಯನ್ನ ಜಯಿಸಿದ್ರೆ, ಮತ್ತೆ ಚಾನ್ಸ್ ಸಿಗಲಿದೆ.
‘ದೇಶಿ ಕ್ರಿಕೆಟ್ ಪಂದ್ಯಗಳನ್ನಾಡಲು ಹೇಳ್ತೀವಿ’
‘ನಾವು ಕೋಚ್ ರಾಹುಲ್ ಮತ್ತು ನೂತನ ನಾಯಕನ ಜೊತೆಗೆ ಮಾತನಾಡುತ್ತೆವೆ. ಆದರೆ ಅವರಿಬ್ಬರಿಗೆ ಬಾಗಿಲು ಮುಚ್ಚಿಲ್ಲ. ಆದ್ರೆ, ಅವರನ್ನ ದೇಶಿ ಕ್ರಿಕೆಟ್ ಪಂದ್ಯಗಳನ್ನಾಡಿ ಮತ್ತೆ ಫಾರ್ಮ್ ಕಂಡುಕೊಂಡು ತಂಡಕ್ಕೆ ಕಮ್ಬ್ಯಾಕ್ ಮಾಡಲು ಪ್ರಯತ್ನಿಸಿ ಎಂದು ಹೇಳುತ್ತೇವೆ’
-ಬಿಸಿಸಿಐ ಅಧಿಕಾರಿ
ಲಂಕಾ ಸರಣಿಯಿಂದ ಕೊಕ್ ನೀಡಿದ್ರೂ, ನಿಮಗೆ ಮತ್ತೆ ಅವಕಾಶ ಸಿಗಲಿದೆ ಅನ್ನೋ ಸಂದೇಶವನ್ನೇನೋ ಟೆಸ್ಟ್ ಸ್ಪೆಷಲಿಸ್ಟ್ಗಳಿಗೆ ಬಿಸಿಸಿಐ ನೀಡಿದೆ. ಈ ಮೂಲಕ ಪೂಜಾರ – ರಹಾನೆಗೆ ಟೀಮ್ ಇಂಡಿಯಾದ ಬಾಗಿಲು ಸಂಪೂರ್ಣವಾಗಿ ಮುಚ್ಚಿಲ್ಲ ಅನ್ನೋದು ಖಾತ್ರಿಯಾಗಿದೆ. ಹಾಗಾದ್ರೆ, ಅವಕಾಶಕ್ಕಾಗಿ ಕಾದು ಕುಳಿತಿರುವ ಯುವ ಆಟಗಾರರ ಭವಿಷ್ಯವೇನು ಅನ್ನೋದು ಪ್ರಶ್ನೆಯಾಗಿದೆ.