ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ವೈರಸ್ ಆರ್ಭಟ ಮುಂದುವರಿದಿದೆ. ಈ ಕೊರೊನಾ ತಡೆಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಹೀಗಾಗಿ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆವರೆಗೂ ಇಡೀ ರಾಜ್ಯದಲ್ಲಿ ಜನ ಸಂಚಾರವೇ ಬಹಳ ಕಡಿಮೆ. ಆದ್ದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವೂ (BMRCL) ಈಗ ಹೊಸ ಆದೇಶವೊಂದು ಹೊರಡಿಸಿದೆ.
ಈ ಮುನ್ನ 20 ನಿಮಿಷಕ್ಕೊಂದು ಮೆಟ್ರೋ ಟ್ರೈನ್ ಇತ್ತು. ಈಗ ಪ್ರಯಾಣಿಕರು ಇಲ್ಲದ ಕಾರಣ 30 ನಿಮಿಷಕ್ಕೊಂದು ಮೆಟ್ರೋ ಇರಲಿದೆ ಎಂದು BMRCL ಹೊರಡಿಸಿದ ಆದೇಶದ ಪ್ರತಿಯಲ್ಲಿದೆ.