
ಸಿಎಂ ಬಸವರಾಜ ಬೊಮ್ಮಾಯಿ
ಎಸ್ ವ್ಯಾಸ ವಿಶ್ವವಿದ್ಯಾಲಯದ 24ನೇ ಇನ್ಕೋಫೈರಾ ಕಾರ್ಯಕ್ರಮದಲ್ಲಿ ರೋಗ ಮುಕ್ತ ಭಾರತ ಪರಿಕಲ್ಪನೆಯ ಅಂಗವಾಗಿ ಇನ್ಕೋಫೈರಾ ಸಂಸ್ಥೆ ಸಿದ್ದಪಡಿಸಿದ ನೂತನ ಆಯು ಆ್ಯಪ್ನ್ನು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು.
ಆನೇಕಲ್: ಕೋವಿಡ್ನಿಂದಾಗಿ ಶಾಲಾ ಕಾಲೇಜುಗಳ ಮಕ್ಕಳ ಮೇಲೆ ಒತ್ತಡದಲ್ಲಿದ್ದಾರೆ. ವಿದ್ಯಾರ್ಥಿಗಳು ಒತ್ತಡರಹಿತರಾಗಿ ವಿದ್ಯಾಭ್ಯಾಸ ಮಾಡುವ ವಾತಾವರಣ ಇರಬೇಕು. ಈ ಹಿನ್ನೆಲೆಯಲ್ಲಿ ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಯೋಗಾಭ್ಯಾಸ ಪರಿಚಯ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರು ಹೊರವಲಯದ ಜಿಗಣಿಯಲ್ಲಿನ ಎಸ್ ವ್ಯಾಸ ವಿಶ್ವವಿದ್ಯಾಲಯದ 24ನೇ ಇನ್ಕೋಫೈರಾ ಕಾರ್ಯಕ್ರಮದಲ್ಲಿ ರೋಗ ಮುಕ್ತ ಭಾರತ ಪರಿಕಲ್ಪನೆಯ ಅಂಗವಾಗಿ ಇನ್ಕೋಫೈರಾ ಸಂಸ್ಥೆ ಸಿದ್ದಪಡಿಸಿದ ನೂತನ ಆಯು ಆ್ಯಪ್ನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.