ಐಪಿಎಲ್ ರೂಲ್ಸ್​ ಬ್ರೇಕ್ ಮಾಡಿದ್ರಾ ಕೆ.ಎಲ್.ರಾಹುಲ್ -ಬ್ಯಾನ್ ಭೀತಿಯಲ್ಲಿ ಕರ್ನಾಟಕ ಬ್ಯಾಟರ್


ಪಂಜಾಬ್​ ಕಿಂಗ್ಸ್​ ತಂಡದ ನಾಯಕನಾಗಿದ್ದ ಕೆ.ಎಲ್.ರಾಹುಲ್,​ ಈ ಬಾರಿ ಆಕ್ಷನ್ ಫುಲ್​ಗೆ ಬರೋದು ಕನ್ಫರ್ಮ್. ದೊಡ್ಡ ಮೊತ್ತದ ಸೇಲಾಗೋ ಉತ್ಸಾಹದಲ್ಲಿದ್ದು, ನೂತನ ಫ್ರಾಂಚೈಸಿಗಳ ಪಾಲಾಗೋ ಸಾಧ್ಯತೆ ಇದೆ. ಆದರೆ ರಾಹುಲ್​​​​ ಕುರಿತು ಇದೀಗ ಪಂಜಾಬ್ ಕಿಂಗ್ಸ್​​​​​ ಫ್ರಾಂಚೈಸಿ, ಆಕ್ರೋಶ ವ್ಯಕ್ತಪಡಿಸಿದೆ.

IPL​ ಆಟಗಾರರ ರಿಟೈನ್ ಪ್ರಕ್ರಿಯೆ​​ ಮುಗಿದಿದೆ. ಮೆಗಾ ಹರಾಜು ಕೂಡ ಶೀಘ್ರದಲ್ಲೇ ನಡೆಯುತ್ತೆ. ಸ್ಟಾರ್​ ಆಟಗಾರರು ತಮ್ಮ ಫ್ರಾಂಚೈಸಿಗಳಿಂದ ಹೊರ ಬಂದಿದ್ದು, ಹರಾಜಿನಲ್ಲಿ ಪಾಲ್ಗೊಳ್ಳೋಕೆ ಸಿದ್ಧತೆ ನಡೆಸಿದ್ದಾರೆ. ಅದೇ ರೀತಿ ಪಂಜಾಬ್​ ಕಿಂಗ್ಸ್​​​ ನಾಯಕ ಕೆ.ಎಲ್​.ರಾಹುಲ್​ ಕೂಡ ಫ್ರಾಂಚೈಸಿ ತೊರೆದಿದ್ದು, ಆಕ್ಷನ್​​​​ ಪೂಲ್​​ಗಿಳಿಯಲು ನಿರ್ಧರಿಸಿದ್ದಾರೆ. ಆದ್ರೆ ಕನ್ನಡಿಗ ರಾಹುಲ್ ನಿರ್ಧಾರಕ್ಕೆ, ಪಂಜಾಬ್​ ಫ್ರಾಂಚೈಸಿ ಸಿಡಿಮಿಡಿಗೊಂಡಿದೆ.

ಆರ್​​.ಅಶ್ವಿನ್​ ಬಳಿಕ ಪಂಜಾಬ್​ ಕಿಂಗ್ಸ್​​ ನಾಯಕತ್ವ ವಹಿಸಿಕೊಂಡಿದ್ದು, ಕೆ.ಎಲ್​.ರಾಹುಲ್​. ನಾಯಕನಾಗಿ ಕಳೆದ ಎರಡು ಆವೃತ್ತಿಗಳಿಂದ ರಾಹುಲ್​ಗೆ, ಸ್ವಾತಂತ್ರ್ಯ ನೀಡಲಾಗಿತ್ತು. ತಂಡವನ್ನ ಒಂದು ಬಾರಿ ಕೂಡ ಕ್ವಾಲಿಫೈಯರ್​​​​ಗೇರಿಸುವಲ್ಲಿ ವಿಫಲವಾದ ರಾಹುಲ್​ರನ್ನ, ತಂಡದಲ್ಲೇ ಉಳಿಸಿಕೊಳ್ಳುವುದಾಗಿ ಪಂಜಾಬ್​ ಹೇಳಿತ್ತು. ಮತ್ತೊಂದೆಡೆ ರಾಹುಲ್​​, ಪಂಜಾಬ್ ಕಿಂಗ್ಸ್​ ತೊರೆದು ಹರಾಜಿಗೆ ಹೋಗುವುದಾಗಿ ಹೇಳಿದ್ರು. ಇದೆಲ್ಲದರ ನಡುವೆ ರಾಹುಲ್, ರಿಟೈನ್​ ಪ್ರಕ್ರಿಯೆಗೂ ಮೊದಲೇ ನೂತನ ಫ್ರಾಂಚೈಸಿಗಳೊಂದಿಗೆ​​ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇದು ಪಂಜಾಬ್​ ಕಿಂಗ್ಸ್ ಮಾಲೀಕರು​ ಕಿಡಿಕಾರೋದಕ್ಕೆ ಕಾರಣವಾಗಿದೆ.

ನಿಯಮ ಬಾಹಿರ ಕೆಲಸ..!
‘ರಾಹುಲ್​​​ ಈಗಾಗಲೇ ಹೊಸ ಫ್ರಾಂಚೈಸಿ ಸಂಪರ್ಕಿಸಿದ್ದರೆ ಅದು ಅನೈತಿಕ. ರಿಟೆನ್ಷನ್ ಪ್ರಕ್ರಿಯೆಯಲ್ಲಿ ರಾಹುಲ್​​​ರನ್ನು ತಂಡದಲ್ಲಿ ಉಳಿಸಿಕೊಳ್ಳುವ ಯತ್ನ ಮಾಡಿದೆವು. ಆದರೆ ರಾಹುಲ್ ಮೆಗಾ ಹರಾಜಿನಲ್ಲಿ ಭಾಗವಹಿಸಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು. ಆದರೆ ರಿಟೆನ್ಷನ್ ಪ್ರಕ್ರಿಯೆಗೂ ಮುನ್ನ ರಾಹುಲ್ ಬೇರೆ ಯಾವುದೇ ಫ್ರಾಂಚೈಸಿ ಜೊತೆ ಖರೀದಿ ಕುರಿತಾಗಿ ಸಂಪರ್ಕ ಬೆಳೆಸಿದರೆ, ಅದೊಂದು ನಿಯಮ ಬಾಹಿರ ಕೆಲಸವಾಗಲಿದೆ’

-ಪಂಜಾಬ್ ಕಿಂಗ್ಸ್​​ ಫ್ರಾಂಚೈಸಿ

ರಾಹುಲ್ ಆಗಮನದಿಂದ ಬ್ರ್ಯಾಂಡ್ ವಾಲ್ಯೂ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಲಖನೌ ಫ್ರಾಂಚೈಸಿ, 20 ಕೋಟಿ ರೂಪಾಯಿ ಆಫರ್ ನೀಡಿದೆ ಎಂದು ವರದಿ ಆಗಿತ್ತು. ಆದರೆ ರಾಹುಲ್​ ರಿಟೈನ್​ ಪ್ರಕ್ರಿಯೆಗೂ ಮುನ್ನವೇ ಫ್ರಾಂಚೈಸಿಗಳನ್ನ ಸಂಪರ್ಕಿಸಿರೋದು, ಎಷ್ಟರ ಮಟ್ಟಿಗೆ ಸರಿ.? ಇದು ಐಪಿಎಲ್​ ನಿಯಮಗಳಿಗೆ ವಿರುದ್ಧವಾದದ್ದು. ಹೀಗಾಗಿ ಬಿಸಿಸಿಐ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ತನಿಖೆಯಲ್ಲಿ ರಾಹುಲ್ ಬೇರೆ ಫ್ರಾಂಚೈಸಿಗಳನ್ನ ಸಂಪರ್ಕಿಸಿದ್ದು ಸಾಬೀತಾದರೆ, ಒಂದು ವರ್ಷ IPL​​​ನಿಂದ ನಿಷೇಧಕ್ಕೆ ಒಳಗಾಗೋದು ಖಚಿತ.

ಒಟ್ನಲ್ಲಿ ಪಂಜಾಬ್ ಕಿಂಗ್ಸ್​ ಫ್ರಾಂಚೈಸಿಯೇನೋ, ರಾಹುಲ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಇದು ನಿಜಾನಾ, ಸುಳ್ಳಾ ಅನ್ನೋದು, ಬಿಸಿಸಿಐ ತನಿಖೆ ಕೈಗೊಂಡ ಬಳಿಕವೇ ಗೊತ್ತಾಗಲಿದೆ.

The post ಐಪಿಎಲ್ ರೂಲ್ಸ್​ ಬ್ರೇಕ್ ಮಾಡಿದ್ರಾ ಕೆ.ಎಲ್.ರಾಹುಲ್ -ಬ್ಯಾನ್ ಭೀತಿಯಲ್ಲಿ ಕರ್ನಾಟಕ ಬ್ಯಾಟರ್ appeared first on News First Kannada.

News First Live Kannada


Leave a Reply

Your email address will not be published. Required fields are marked *