ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟು ಅಪ್ಪು ಸಮಾಧಿ ದರ್ಶನ ಪಡೆದ ತ.ನಾಡು ಸಿಎಂ ಪುತ್ರ


ಬೆಂಗಳೂರು: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ಪುತ್ರ ಉದಯನಿಧಿ ಸ್ಟಾಲಿನ್​​ ಇಂದು ಕಂಠೀರವ ಸ್ಟುಡಿಯೋ ಹಾಗೂ ಪುನೀತ್​ ರಾಜ್​​ಕುಮಾರ್​ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ್ದರು.

ಪುನೀತ್​ ನಮ್ಮನ್ನು ಅಗಲಿ ಇಂದಿಗೆ 12 ದಿನಗಳು ಕಳೆದಿದೆ. ಈಗಾಗಲೇ ತಮಿಳುನಾಡಿನ ಹಲವು ಸ್ಟಾರ್ ನಟರು, ಪುನೀತ್​ರ ಅಂತಿಮ ದರ್ಶನ ಪಡೆದು ರಾಜ್​ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದಾರೆ. ಇಂದು ಪುನೀತ್​ ರಾಜ್​ಕುಮಾರ್ ನಿವಾಸಕ್ಕೆ ಆಗಮಿಸಿದ್ದ ಡಿಎಂಕೆ ಶಾಸಕ, ನಟ ಉದಯನಿಧಿ ಸ್ಟಾಲಿನ್, ಅಪ್ಪು ಪತ್ನಿ ಅಶ್ವಿನಿ, ಶಿವರಾಜ್​ಕುಮಾರ್​​ಗೆ ಸಂತ್ವಾನ ಹೇಳಿದರು.

ಇದಕ್ಕೂ ಮುನ್ನ ಕಂಠೀರವ ಸ್ಟುಡಿಯೋಗೆ ಆಗಮಿಸಿದ ಉದಯನಿಧಿ ಸ್ಟಾಲಿನ್, ಪುನೀತ್ ಸಮಾಧಿ ದರ್ಶನ ಪಡೆದು, ಸಮಾಧಿಗೆ ಹೂವಿ ನ‌ ಹಾರ ಹಾಕಿ ನಮನ ಸಲ್ಲಿಸಿದ್ದರು.

News First Live Kannada


Leave a Reply

Your email address will not be published. Required fields are marked *