ಕನ್ನಡ ಕಾಡಿನ ತಾಯಿ.. ಬರಿಗಾಲಲ್ಲೇ ಬಂದ ‘ಪದ್ಮಶ್ರೀ’; ರಾಷ್ಟ್ರಪತಿಗಳಿಗೂ ಅಚ್ಚರಿ ಮೂಡಿಸಿದ ತುಳಸಿ ಗೌಡ


ಕಾರವಾರ ಜಿಲ್ಲೆಯ ಅಪ್ಪಟ ಕನ್ನಡತಿ, ಹಾಲಕ್ಕಿ ಮಹಿಳೆ ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿಯನ್ನು ಸ್ವೀಕಾರ ಮಾಡಿದ್ದಾರೆ. ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಶಸ್ತಿ ಪ್ರಧಾನ ಮಾಡಿದರು.

ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸುವಂತೆ ಕರೆ ಬಂದಾಗ ಸಭಾಂಗಣದ ತುಂಬ ಕ್ಷಣ ಹೊತ್ತು ಚಪ್ಪಾಳೆಯ ಮೊರೆತ ಆರಂಭವಾಯಿತು. ನಿತ್ಯದಂತೆ ಹಾಲಕ್ಕಿ ಸಮುದಾಯದ ಸೀರೆ ಉಟ್ಟು ಬಂದಿದ್ದ ತಲಸಿ ಗೌಡ ಅವರು, ಎದ್ದು ನಿಂತು ಬರಿಗಾಲಲ್ಲೆ ಹೆಜ್ಜೆ ಹಾಕಿದರು. ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ವೇದಿಕೆ ಮುಂಭಾಗ ಕೂತಿದ್ದ ಪ್ರಧಾನಿಯನ್ನ ನೋಡಿ ವಿನಮ್ರವಾಗಿ ವೃಕ್ಷಮಾತೆ ನಮಿಸಿದ್ದರು. ಅಷ್ಟೇ ವಿನಮ್ರವಾಗಿ ಮೋದಿ ಕೂಡ ತುಳಸಿಗೌಡ ಅವರಿಗೆ ನಮಸ್ಕಾರ ಮಾಡಿದ್ದರು.

ಇದನ್ನೂ ಓದಿ:‘ಪ್ರಧಾನಿ ನನ್ನ ಕೈ ಮುಟ್ಟಿ ಮಾತಾಡಿಸಿದ್ರು’ ಮುಗ್ಧವಾಗಿಯೇ ಸಂಭ್ರಮ ಹಂಚಿಕೊಂಡ ಅಕ್ಷರ ಸಂತ ಹಾಜಬ್ಬ

ಬೆರಗುಗಣ್ಣಿನಿಂದಲೇ ವೇದಿಕೆ ಹತ್ತಿದ ವೃಕ್ಷಮಾತೆ..

ಇನ್ನು, ವೇದಿಕೆ ಹತ್ತಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ ಕಾಲಿಗೆ ನಮಸ್ಕರಿಸಲು ತುಲಸಿ ಗೌಡ ಅವರು ಮುಂದಾಗಿದ್ದರು. ಈ ವೇಳೆ ಅವರನ್ನು ತಡೆದ ರಾಷ್ಟ್ರಪತಿಗಳು ತಾವು ತಲೆ ಬಾಗಿ ಅರಣ್ಯ ದೇವತೆಗೆ ನಮಿಸಿದರು. ಆ ಬಳಿಕ ಪ್ರಶಸ್ತಿ ಪತ್ರವನ್ನು ವಿತರಿಸಿದರು.

News First Live Kannada


Leave a Reply

Your email address will not be published. Required fields are marked *