”ಕಬೀರ್ ಸಿಂಗ್” ಸಿನಿಮಾದ ಯಶಸ್ಸಿನ ನಂತರ ನಾನು ಭಿಕ್ಷುಕನಂತೆ ಅಲೆದಾಡಿದೆ ಎಂದು ಬಾಲಿವುಡ್ ನಟ ಶಾಹಿದ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ”ಕಬೀರ್ ಸಿಂಗ್” ಸಿನಿಮಾ ಮೂಲತಃ ತೆಲುಗಿನಲ್ಲಿ ವಿಜಯ್ ದೇವರ ಕೊಂಡ ನಟಿಸಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ”ಅರ್ಜುನ್ ರೆಡ್ಡಿ” ಸಿನಿಮಾದ ರೀಮೇಕ್. ರಿಮೇಕ್ ಆದ್ರೂ ”ಕಬೀರ್ ಸಿಂಗ್” ಸಿನಿಮಾ ಬಾಲಿವುಡ್ನಲ್ಲೂ ಸೂಪರ್ ಹಿಟ್ ಆಗಿದ್ದಲ್ಲದೆ ಶಾಹೀದ್ಗೆ ರಾತ್ರೋ ರಾತ್ರಿ ಸ್ಟಾರ್ ಗಿರಿ ತಂದುಕೊಟ್ಟಿತ್ತು.
ಈ ಕುರಿತು ಮಾತನಾಡಿರುವ ಶಾಹಿದ್ ನಾನು 16 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ರು ನನಗೆ ಒಂದು ಹಿಟ್ ಸಿಕ್ಕಿರಲಿಲ್ಲ. ಮತ್ತು 200 ಕೋಟಿ ಕ್ಲಬ್ ಸೇರೋ ಅಂತ ಸಿನಿಮಾವನ್ನು ಮಾಡಿರಲಿಲ್ಲ. ಆದರೆ ”ಕಬೀರ್ ಸಿಂಗ್” ನನಗೆ ಎಲ್ಲವನ್ನೂ ನೀಡಿತು. ಈ ಸಿನಿಮಾ 200 ಕೋಟಿ ಕ್ಲಬ್ ಸೇರಿದ ಖುಷಿಯಲ್ಲಿ ನಾನು, ಯಾರೆಲ್ಲಾ 200 ಕೋಟಿ ಕ್ಲಬ್ ಸೇರಿದ್ದ ಸಿನಿಮಾಗಳನ್ನು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರೋ, ಅವರಲ್ಲರ ಬಳಿ ನನಗೊಂದು ಸಿನಿಮಾ ಮಾಡಿ ಎಂದು ಭಿಕ್ಷುಕನಂತೆ ಅಲೆದಾಡಿದ್ದೇನೆ ಎಂದು ಮನಸಿನ ಮಾತನ್ನು ಹೇಳಿದ್ದಾರೆ.
‘ಕಬೀರ್ ಸಿಂಗ್” ಯಶಸ್ಸಿನ ನಂತರ ರಮೇಕ್ಗೆ ಅಂಟಿಕೊಂಡಿರುವ ಶಾಹೀದ್, ತೆಲುಗಿನಲ್ಲಿ ನ್ಯಾಚ್ಯುರಲ್ ಸ್ಟಾರ್ ನಟಿಸಿದ್ದ ”ಜೆರ್ಸಿ” ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಿದ್ದಾರೆ. ”ಜೆರ್ಸಿ” ಸಿನಿಮಾದ ಟ್ರೈಲರ್ ಲಾಂಚ್ನಲ್ಲಿ ತಮ್ಮ ಮನದಾಳತ ಮಾತನ್ನು ಬಿಚ್ಚಿಟ್ಟಿದ್ದಾರೆ. ಇನ್ನು ತೆಲುಗಿನ ”ಜೆರ್ಸಿ ”ಗೆ ಆ್ಯಕ್ಷನ್ ಕಟ್ ಹೇಳಿದ್ದ ಗೌತಮ್ ತಿನ್ನಾರು ಬಾಲಿವುಡ್ ”ಜೆರ್ಸಿ” ಗೂ ಆ್ಯಕ್ಷನ್ ಕಟ್ ಹೇಳುವ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.