
ದಾವಣಗೆರೆಯ ರೇಲ್ವೆ ಅಂಡರ್ ಪಾಸ್ನಲ್ಲಿ ತುಂಬಿಕೊಂಡ ನೀರು.
ಮತ್ತೆ ಶುರುವಾಗಿದೆ ಮಳೆ ರಗಳೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಜನರು ಪರದಾಡುವಂತ್ತಾಗಿದೆ.
ವಿಜಯಪುರ: ಕಳೆದ ರಾತ್ರಿ ವಿಜಯಪುರ ಜಿಲ್ಲೆಯ ಕೆಲ ಭಾಗಗಳಲ್ಲಿ ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲು ಬಡಿದು ಎತ್ತು ಬಲಿಯಾದಂತಹ ಘಟನೆ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಖಾನಿಕೇರಿ ಗ್ರಾಮದಲ್ಲಿ ನಡೆದಿದೆ. ಖಾನಿಕೇರಿ ಗ್ರಾಮದ ರೈತ ಗದ್ದೆಪ್ಪ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಅಂದಾಜು 80 ಸಾವಿರ ರೂಪಾಯಿ ಮೌಲ್ಯದ ಎತ್ತಾಗಿದ್ದು, ತೋಟದ ಶೆಡ್ನಲ್ಲಿ ಕಟ್ಟಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಕಂದಾಯ ಇಲಾಖೆ ಆಧಿಕಾರಿಗಳು ಭೇಟಿ ನೀಡಿದ್ದು, ರೈತ ಗದ್ದೆಪ್ಪಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.