ಸೆಮಿಫೈನಲ್ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ, ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ತು. ಈ ಹಿನ್ನೆಲೆ ಬ್ಯಾಟಿಂಗ್ಗೆ ಬಂದ ಸ್ಕಾಟ್ಲೆಂಡ್, ಭಾರತದ ಬೌಲರ್ಗಳ ದಾಳಿಗೆ ತತ್ತರಿಸ್ತು. ಆರಂಭದಲ್ಲೇ ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ನಡೆಸಿ, ಜಾರ್ಜ್ ಮುನ್ಸೆ ಮತ್ತು ಕೈಲ್ ಕೊಯೆಟ್ಜ್ಗೆ ಗೇಟ್ಪಾಸ್ ನೀಡಿದ್ರು.
ಬಳಿಕ ದಾಳಿಗಿಳಿದ ಜಡೇಜಾ, ಸ್ಕಾಟ್ಲೆಂಡ್ಗೆ ಕಂಟಕವಾದ್ರು. ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸ್ಕಾಟ್ಲೆಂಡ್ಗೆ ಜಡೇಜಾ, ಡಬಲ್ ಶಾಕ್ ನೀಡಿದ್ರು. ಓವರ್ನಲ್ಲಿ ಬೆರಿಂಗ್ಟನ್, ಮ್ಯಾಥ್ಯೂ ಕ್ರಾಸ್ಗೆ ಪೆವಿಲಿಯನ್ ದಾರಿ ತೋರಿಸಿದ ಬೆನ್ನಲ್ಲೆ ಮೈಕಲ್ ಲೀಸ್ಕ್ಗೂ ಜಡೇಜಾ, ಡಗೌಟ್ ಸೇರುವಂತೆ ಮಾಡಿದ್ರು. ಇದಾದ ನಂತರ ಕ್ರಿಸ್ ಗ್ರೀವ್ಸ್, ಶರಿಫ್, ಎವಾನ್ಸ್, ಮಾರ್ಕ್ ವ್ಯಾಟ್ ಕೂಡ ಬೇಗನೇ ಔಟಾದ್ರು. ಪರಿಣಾಮ ಸ್ಕಾಟ್ಲೆಂಡ್ 17.4 ಓವರ್ಗಳಲ್ಲಿ ಆಲ್ಔಟ್ ಆಯ್ತು.
ಸ್ಕಾಟ್ಲೆಂಡ್ ನೀಡಿದ ಸಾಧಾರಣ ಮೊತ್ತವನ್ನ ಬೆನ್ನತ್ತಿದ್ದ ಟೀಮ್ ಇಂಡಿಯಾ, ಬೌಲರ್ಗಳ ಬೆಂಡೆತ್ತಿದ್ರು. ನೆಟ್ ರನ್ರೇಟ್ ಹೆಚ್ಚಿಸಿಕೊಳ್ಳಬೇಕಿದ್ದ ಕಾರಣ ರೋಹಿತ್ ಶರ್ಮಾ-ಕೆ.ಎಲ್ ರಾಹುಲ್ ಫೋರ್- ಸಿಕ್ಸ್ಗಳ ಸುರಿಮಳೆಗೈದ್ರು. ಇದರ ನಡುವೆ ರಾಹುಲ್ 18 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ರು. ಆದರೆ ಗೆಲುವಿನ ಹಂತದಲ್ಲಿದ್ದಾಗ ರೋಹಿತ್, ರಾಹುಲ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರಾದ್ರು, ಸೂರ್ಯಕುಮಾರ್ ವಿನ್ನಿಂಗ್ ಸಿಕ್ಸ್ ಸಿಡಿಸಿದ್ರು. ಪರಿಣಾಮ ಟೀಮ್ ಇಂಡಿಯಾ 8 ವಿಕೆಟ್ಗಳ ಗೆಲುವು ದಾಖಲಿಸ್ತು.
ಸದ್ಯ ಭಾರತ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಸದ್ಯ ನೆಟ್ರನ್ರೇಟ್ ಸಖತ್ತಾಗೇ ಹೆಚ್ಚಿಸಿಕೊಂಡಿದ್ದು, ಸೆಮೀಸ್ ಆಸೆ ಇನ್ನೂ ಜೀವಂತವಾಗಿದೆ. ಆದರೆ ಸೆಮೀಸ್ಗೆ ಎಂಟ್ರಿ ಪಡೆಯಬೇಕೆಂದ್ರೆ ಭಾರತಕ್ಕೆ ಒಂದೇ ಮಾರ್ಗ ಇದೆ. ಭಾನುವಾರ ನಡೆಯೋ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಫ್ಘಾನಿಸ್ತಾನ ಗೆಲುವು ಸಾಧಿಸಬೇಕು. ಇದು ಸಾಧ್ಯವಾದ್ರೆ ಮಾತ್ರ ಭಾರತ ಸೆಮೀಸ್ಗೇರಲು ಅವಕಾಶ ಇದೆ. ಒಂದು ವೇಳೆ ನ್ಯೂಜಿಲೆಂಡ್ ಗೆದ್ದರೆ, ಅಲ್ಲಿಗೆ ಭಾರತ ವಿಶ್ವಕಪ್ ಲೀಗ್ನಿಂದ ಹೊರಬೀಳಲಿದೆ. ಹಾಗಾಗಿ ಭಾರತದ ಇಡೀ ಕ್ರಿಕೆಟ್ ಅಭಿಮಾನಿಗಳ ಚಿತ್ತ ಆಫ್ಘನ್-ಕಿವೀಸ್ ಪಂದ್ಯದತ್ತ ನೆಟ್ಟಿದೆ.
The post ಕಿಂಗ್ ಕೊಹ್ಲಿಗೆ ಬರ್ತ್ಡೇ ಗಿಫ್ಟ್; ಜಡೇಜಾ-ಶಮಿ ಶೈನಿಂಗ್, ರಾಹುಲ್-ರೋಹಿತ್ ಮಿಂಚಿಂಗ್ -ಹೇಗಿತ್ತು ಆಟ? appeared first on News First Kannada.