ಕುಮಾರ್​​ ಬಂಗಾರಪ್ಪ ಪುತ್ರಿಗೆ ಇಂದು ಮದುವೆ ಸಂಭ್ರಮ; ಇಲ್ಲಿವೆ ಎಕ್ಸ್​ಕ್ಲೂಸಿವ್ ಫೋಟೋಸ್


ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಗಲಿಕೆಯ ನೋವಿನ ನಡುವೆಯೇ ದೊಡ್ಮನೆ ಕುಟುಂಬದ ನಿರ್ಧಾರದಂತೆ ಮಾಜಿ ಸಚಿವ ಕುಮಾರ್​​ ಬಂಗಾರಪ್ಪ ಅವರ ಪುತ್ರಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಬೆಂಗಳೂರಿನ ಅರಮನೆ ಆವರಣದಲ್ಲಿ ಕುಮಾರ್​​ ಬಂಗಾರಪ್ಪ ಅವರ ಪುತ್ರಿ ಲಾವಣ್ಯ ಇಂದು ವಿಕ್ರಮಾದಿತ್ಯ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾಹ ನಡೆಯುವ ಅರಮನೆ ಆವರಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಬೆಂಗಳೂರಿನ ಖ್ಯಾತ ಮೇಕಪ್​​ ಕಲಾವಿದೆ ಗೀತಾಂಜಲಿ ವೆಂಕಟೇಶ್​, ಮದುಮಗಳು ಲಾವಣ್ಯಗೆ ಮೇಕಪ್ ಮಾಡಿದ್ದಾರೆ. ಗೀತಾಂಜಲಿ ಅವರು ಕಳೆದ 5 ವರ್ಷಗಳಿಂದ ಮೇಕಪ್ ಕಲಾವಿದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಮೊದಲು ಮೇ.30 ರಂದು ನಡೆಯಬೇಕಿದ್ದ ಮದುವೆಯನ್ನು ಕೋವಿಡ್ ಕಾರಣದಿಂದ ಕುಟುಂಬದರು ಮುಂದೂಡಿದ್ದರು. ಅದರಂತೆ ಇಂದು ಮದುವೆ ನಡೆಯುತ್ತಿದೆ. ಈ ಶುಭ ಸಮಾರಾಂಭಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂಗಳು, ವಿರೋಧ ಪಕ್ಷದ ನಾಯಕರು, ತೆಲುಗು, ತಮಿಳು, ಕನ್ನಡ ಚಿತ್ರೋದ್ಯಮದ ಗಣ್ಯರು, ದೆಹಲಿಯ ನಾಯಕರು ಸೇರಿದಂತೆ ಹಲವು ಗಣ್ಯರು ಆಗಮಿಸುವ ಸಾಧ್ಯತೆ ಇದೆ.

News First Live Kannada


Leave a Reply

Your email address will not be published. Required fields are marked *