ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ “ಪುಷ್ಪ” ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ನಿನ್ನೆ ಚಿತ್ರದ ಟ್ರೈಲರ್ ಕೂಡ ಬಹಳ ತಡವಾಗಿ ರಿಲೀಸ್ ಆಗಿತ್ತು. ಇನ್ನು ಈ ಟ್ರೈಲರ್ ಒಂದಿಷ್ಟು ಜನಕ್ಕೆ ಇಷ್ಟವಾಗಿದ್ರೆ, ಮತ್ತೊಂದೊಂದಿಷ್ಟು ಜನಕ್ಕೆ ಪುಷ್ಪ ಚಿತ್ರದ ಆಷ್ಟಾಗಿ ಇಷ್ಟವಾಗಿಲ್ಲ.
“ಪುಷ್ಪ” ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಸಿನಿ ಪ್ರೇಕ್ಷಕರು ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ “ಪುಷ್ಪ” ಟ್ರೈಲರ್ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಅಂತಾ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಷಯವಾಗಿ ನೆಟ್ಟಿಗರು ಪುಷ್ಪ ಚಿತ್ರದ ಟ್ರೈಲರ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.
ಟಾಲಿವುಡ್ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ “ಪುಷ್ಪ” ಚಿತ್ರದ ಟ್ರೈಲರ್ ಅನ್ನು ಇನೂ ಕೆಲವರು ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರಕ್ಕೆ ಹೊಲಿಸಿದ್ದಾರೆ. ಪುಷ್ಪ ಚಿತ್ರ ಕೆಜಿಎಫ್ ಚಿತ್ರದ ರೇಂಜ್ನಲ್ಲಿ ಇರಲಿದೆ ಅಂತ ಕೆಲ ಅಭಿಮಾನಿಗಳು ಎಕ್ಸ್ಪೆಕ್ಟ್ ಮಾಡಿದ್ರು. ಆದರೆ “ಪುಷ್ಪ” ಚಿತ್ರದ ಟ್ರೈಲರ್ ಕೆಜಿಎಫ್ ಸಿನಿಮಾದಷ್ಟಿಲ್ಲ ಅಂತ ಒಂದಿಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.
ಚಿತ್ರದ ಶೂಟಿಂಗ್ ಹಂತದಲ್ಲಿ ಪುಷ್ಪ ಸಿನಿಮಾವನನ್ನು ಕನ್ನಡದ ಕೆಜಿಎಫ್ಗೆ ಚಿತ್ರತಂಡ ಹೋಲಿಕೆ ಮಾಡಿತ್ತು. ನಮ್ಮ ಚಿತ್ರ ಕೆಜಿಎಫ್ಗಿಂತಲೂ ದೊಡ್ಡ ಮಟ್ಟದಲ್ಲಿ ಮೂಡಿ ಬಂದಿದೆ. ನಮ್ಮದು ಕೂಡ ಫ್ಯಾನ್ ಇಂಡಿಯಾ ಸಿನಿಮಾ ಎಂದು ನಿರ್ಮಾಪಕರು ಹೇಳಿದ್ದರು. ನಿರ್ಮಾಪಕರ ಈ ಹೇಳಿಕೆ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಸದ್ಯ ಪುಷ್ಪ ಟ್ರೈಲರ್ ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದೆ. ಈ ನಡುವೆ ಅಲ್ಲು ಅರ್ಜುನ್ಗೆ ಕ್ಲಾಸ್ ಇಮೇಜ್ ತಂದು ಕೊಟ್ಟಿದ್ದ ನಿರ್ದೇಶಕ ಸುಕುಮಾರ್ ಚಿತ್ರದಲ್ಲಿ ಐಕಾನ್ ಸ್ಟಾರ್ಗೆ ಮಾಸ್ ಇಮೇಜ್ ಕೊಟ್ಟಿದ್ದು, ಸಿನಿಮಾ ಕೆಜಿಎಫ್ಗಿಂತಲೂ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.