ಕೇದಾರನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ


ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೇದಾರನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.

Image

ಇಂದು ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಪ್ರದಾನಿ ಮೋದಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾರುದ್ರಾಭಿಷೇಕ ಮಾಡಿದರು. ಆ ಬಳಿಕ ಅವರು ಸರಸ್ವತಿ ಅಷ್ಟಪಥ ಯೋಜನೆಯ ಕಾಮಗಾರಿಗಳನ್ನು ವೀಕ್ಷಣೆ ಮಾಡಲಿದ್ದು ಶಂಕರಾಚಾರ್ಯರ ನೂತನ ಪ್ರತಿಮೆಯನ್ನ ಲೋಕಾರ್ಪಣೆಗೊಳಿಸಲಿದ್ದಾರೆ.

ಪ್ರಧಾನಿ ಮೋದಿಗೆ ಉತ್ತಾರಖಾಂಡ್​ ಮುಖ್ಯಮಂತ್ರಿ ಪುಷ್ಕೆರ್​ ಧಮಿ ಸಾರ್ತ್ ನೀಡಿದ್ದು ಮೋದಿ ಭೇಟಿ ಹಿನ್ನೆಲೆ ದೇಗುಲಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಇನ್ನು ಪ್ರಧಾನಿಯಾದ ಬಳಿಕ ಕೇದಾರನಾಥ್​ಕ್ಕೆ ಮೋದಿ ಅವರ 5 ನೇ ಭೇಟಿ ಇದಾಗಿದೆ. ಇನ್ನು ₹400 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಾಗಾರಿಗಳನ್ನ ಉದ್ಘಾಟನೆ ಮಾಡಲಿರುವ ಮೋದಿ ನಂತರ ಸಾರ್ವಜನಿಕರನ್ನ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.

Image

ಇದನ್ನೂ ಓದಿ:ಕೇದಾರನಾಥ್​​ನಲ್ಲಿ ಪ್ರಧಾನಿ ಮೋದಿ.. ₹400 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

News First Live Kannada


Leave a Reply

Your email address will not be published. Required fields are marked *