ತಿರುವನಂತಪುರಂ: ಕೇರಳದ ನಟೋರಿಯಸ್ ಭೂಗತ ಪಾತಕಿ ಜೀಯಾನನ್ನ ಮುಂಬೈ ವಿಮಾನ ನಿಲ್ದಾಣದ ಬಳಿ ಕೇರಳ ಎಟಿಎಸ್ ಪಡೆ ಬಂಧಿಸಿದೆ.
ಕೇರಳದ ನಟೋರಿಯಸ್ ಗ್ಯಾಂಗ್ ಕಾಲಿಯಾ ರಫೀಕ್ ಮತ್ತು ಡಾನ್ ತಸ್ಲೀಮ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ಪೈವಳಿಕೆಯ ಜೀಯಾ, ಕೊಲೆ , ಹಫ್ತಾ ವಸೂಲಿ ಪ್ರಕರಣದಲ್ಲೂ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಅಲ್ಲದೇ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದ್ದ ಕಾಲಿಯಾ ರಫೀಕ್ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಜೀಯಾ, ವಿದೇಶದಲ್ಲಿ ತನ್ನ ಭೂಗತ ನೆಟ್ವರ್ಕ್ ನಡೆಸುತ್ತಿದ್ದ.
ಸದ್ಯ ನಕಲಿ ಪಾಸ್ಪೋರ್ಟ್ ಬಳಸಿ ವೇಷ ಮರೆಸಿ ಕೇರಳಕ್ಕೆ ಬಂದಿದ್ದ ಜೀಯಾನನ್ನ ಕೇರಳ ಎ ಟಿ ಎಸ್ ಪಡೆಯ ಅಧಿಕಾರಿಗಳು ಬಂಧಿಸಿ, ಬಿಗಿ ಭದ್ರತೆಯ ಮಧ್ಯೆ ಭೂಗತ ಪಾತಕಿಯನ್ನ ಕೇರಳಕ್ಕೆ ಕರೆದ್ಯೊಯ್ದಿದ್ದಾರೆ.