ಮಂಡ್ಯ: ಕೇಶ ಮುಂಡನೆ ಮಾಡಿಸಿಕೊಂಡು ಸಂಪ್ರದಾಯದಂತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ತಿಥಿ ಕಾರ್ಯವನ್ನ ಎಲೆಚಾಕನಹಳ್ಳಿ ಗ್ರಾಮಸ್ಥ ನೆರವೇರಿಸಿದ್ದಾರೆ.
ಸಂಪ್ರದಾಯದಂತೆ ಕೇಶಮುಂಡನೆ ಮಾಡಿಸಿಕೊಂಡು ಪುನೀತ್ ಭಾವಚಿತ್ರಕ್ಕೆ ವ್ಯಕ್ತಿ ಪೂಜೆ ಸಲ್ಲಿಸಿದ್ದಾರೆ. ನಂತರ ಪುನೀತ್ ಭಾವಚಿತ್ರದ ಮುಂದೆ ಎಡೆ ಇಟ್ಟು ನಮನ ಸಲ್ಲಿಸಲಾಯಿತು. ಅದಾದ ಬಳಿಕ ಮುದ್ದೆ ಮತ್ತು ಸಿಹಿ ಪಾದರ್ಥಗಳ ಜೊತೆಗೆ ಅನ್ನಸಂತರ್ಪಣೆ ಮಾಡಿದ್ದಾರೆ.
‘ಅಭಿಮಾನಿಗಳೇ ನಮ್ಮನೆ ದೇವರು’ ಎಂದು ಕೊಂಡಿರುವ ದೊಡ್ಮನೆ ಕುಟುಂಬ ನಿನ್ನೆ ಅಪ್ಪು ಫ್ಯಾನ್ಸ್ಗೆ ಅನ್ನದಾನ ಇಟ್ಟುಕೊಂಡಿತ್ತು. ಅದರಂತೆ ಬೆಂಗಳೂರಿನ ಅರಮನೆ ಮೈದಾದಲ್ಲಿ ಸಾಮೂಹಿಕ ಅನ್ನದಾನ ಕಾರ್ಯಕ್ರಮವನ್ನ ಆಯೋಜಿಸಿತ್ತು. ಅಕ್ಟೋಬರ್ 29 ರಂದು ಹಠಾತ್ ಹೃದಯಾಘಾತದಿಂದ ಪುನೀತ್ ರಾಜ್ಕುಮಾರ್ ನಿಧನರಾಗಿದ್ದಾರೆ.