ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರ ಒಡಕು ಬಹಿರಂಗವಾಗಿದೆ. ‘ಕೈ’ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣಕ್ಕೆ ಜಮೀರ್ ಗೈರಾಗಿದ್ದು, ಕಾರ್ಯಕರ್ತರು ಸಂಯಮ ಕಳೆದುಕೊಳ್ಳುವಂತೆ ಮಾಡ್ತು. ಇದೇ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಕೂಡ ತಾಳ್ಮೆ ಕಳೆದುಕೊಂಡು ಕಾರ್ಯಕರ್ತರ ವಿರುದ್ಧ ಕೆಂಡಕಾರಿದ್ರು.
ಕಾಂಗ್ರೆಸ್ನ ಅಲ್ಪಸಂಖ್ಯಾತ ನಾಯಕರ ಒಡಕು ಬಹಿರಂಗ
ಮಂಗಳವಾರ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಮಾರಂಭಕ್ಕೆ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಬಂದಿರಲಿಲ್ಲ. ಜಮೀರ್ ಗೈರು ಹಾಜರಿಗೆ ಸಿಟ್ಟಿಗೆದ್ದಿದ್ದ ಕಾರ್ಯಕರ್ತರು ಸಂಯಮ ಮರೆತಿದ್ರು. ಇದ್ರ ಎಫೆಕ್ಟ್ ಎಂಬಂತೆ ಕಾರ್ಯಕ್ರಮ ಗೊಂದಲ ಗದ್ದಲ ಗಲಾಟೆಯಲ್ಲಿ ಮುಳುಗಿತ್ತು.
ಸಿದ್ದರಾಮಯ್ಯ ಭಾಷಣದ ವೇಳೆ ಕೈ ಕಾರ್ಯಕರ್ತರು ತಮ್ಮ ಸಿಟ್ಟು ಹೊರಹಾಕಿದ್ರು. ಇದೇ ವೇಳೆ ಕೇಳಿಬಂದ ಜಮೀರ್ ಪರ ಘೋಷಣೆಗಳಿಂದ ಡಿ.ಕೆ.ಶಿವಕುಮಾರ್ ಸಿಟ್ಟಿಗೆದ್ದರು. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಭಾಷಣವನ್ನ ಮೊಟಕುಗೊಳಿಸಿದ್ರು. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಕಾರ್ಯಕರ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.
ಕೆಪಿಸಿಸಿ ಸಾರಥಿ ಕೆಂಡಾಮಂಡಲ!
ಡಿಕೆ ಕಿಡಿ 1: ಇದು ಕಾಂಗ್ರೆಸ್ ಸಭೆ ಎಲ್ಲರನ್ನೂ ಎತ್ತಿ ಆಚೆ ಹಾಕಿಸ್ತೀನಿ
ಡಿಕೆ ಕಿಡಿ 2: ವ್ಯಕ್ತಿ ಪೂಜೆ ಇಲ್ಲಿ ಇಲ್ಲ, ಕಾಂಗ್ರೆಸ್ ಪಾರ್ಟಿ ಪೂಜೆ ಅಷ್ಟೇ
ಡಿಕೆ ಕಿಡಿ 3: ಅಪೋಸಿಷನ್ ಪಾರ್ಟಿ ಲೀಡರ್ ಭಾಷಣ ಮಾಡ್ತಿದ್ದಾರೆ
ಡಿಕೆ ಕಿಡಿ 4: ಅವರ ಭಾಷಣ ನಿಲ್ಲಿಸಿದ್ದೀರಾ, ನೀವೆಲ್ಲ ಪಕ್ಷ ದ್ರೋಹಿಗಳು
ಡಿಕೆ ಕಿಡಿ 5: ಈ ಬೂಟಾಟಿಕೆ ಎಲ್ಲಾ ಬಿಡಿ, ಅವ್ರನ್ನೆಲ್ಲಾ ಎತ್ತಿ ಆಚೆ ಹಾಕ್ರೀ
ಜಮೀರ್ ಯಾಕೆ ಬರಲಿಲ್ಲ..?
ಕಾರಣ 1: ಜಮೀರ್ ವಿರೋಧಿ ಬಣ ಪಾಲಾದ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಪಟ್ಟ
ಕಾರಣ 2: ಶಕೀಲ್ ನವಾಜ್ನ್ನು ಘಟಕದ ಅಧ್ಯಕ್ಷರನ್ನಾಗಿಸಲು ಯತ್ನಿಸಿದ್ದ ಜಮೀರ್
ಕಾರಣ 3: ಅಬ್ದುಲ್ ಜಬ್ಬಾರ್ ಪಾಲಾದ ‘ಕೈ’ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗಾದಿ
ಕಾರಣ 4: ಆಪ್ತನಿಗೆ ಸ್ಥಾನ ಸಿಗದ ಕಾರಣ ಅಸಮಾಧಾನದಲ್ಲಿರುವ ಜಮೀರ್ ಅಹ್ಮದ್
ಕಾರಣ 5: ದೆಹಲಿಯಲ್ಲಿ ವೈಯಕ್ತಿಕ ಕೆಲಸದ ನೆಪವೊಡ್ಡಿ ಕಾರ್ಯಕ್ರಮಕ್ಕೆ ಜಮೀರ್ ಗೈರು
ಒಟ್ಟಿನಲ್ಲಿ ಅಲ್ಪಸಂಖ್ಯಾತ ಗಾದಿ ಆಪ್ತನ ಕೈ ತಪ್ಪಿದ್ದಕ್ಕೆ ಜಮೀರ್ ಗೈರಾಗಿದ್ದು ಹಸ್ತ ಮನೆಯ ಒಡಕನ್ನ ಎತ್ತಿ ತೋರಿಸಿತ್ತು. ಇದೇ ಕಾರಣಕ್ಕೆ ಜಮೀರ್ ಪರ ಘೋಷಣೆ ಕೂಗಿದ್ದು, ಡಿ.ಕೆ.ಶಿವಕುಮಾರ್ನ್ನ ಕೆರಳಿಸಿ, ತಮ್ಮದೇ ಪಕ್ಷದ ಕಾರ್ಯಕರ್ತರನ್ನ ಡಿ.ಕೆ.ಶಿವಕುಮಾರ್ ಪಕ್ಷ ದ್ರೋಹಿಗಳು ಎಂದುಬಿಟ್ರು. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಈ ಒಡಲು ಇನ್ನೆಲ್ಲಿಗೆ ಹೋಗಿ ನಿಲ್ಲುತ್ತೋ.
ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ