ಕಳೆದ 2 ವರ್ಷಗಳಿಂದ ಕೊರೊನಾ ಮಾಹಾಮಾರಿಯಿಂದ ಕನ್ನಡ ಚಿತ್ರರಂಗ ತತ್ತರಿಸಿ ಹೋಗಿದ್ದು ಈಗತಾನೆ ಮೆಲ್ಲಗೆ ಮೇಲೇಳುತ್ತಿದೆ. ಈ ಹೊತ್ತಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತೆ ‘ಓಮಿಕ್ರಾನ್’ ಎಂಬ ಮಹಾಮಾರಿ ಅಡ್ಡಗಾಲು ಹಾಕಿದೆ.
ಇದೇ ತಿಂಗಳ 10 ನೇ ತಾರೀಖು ಬಿಡುಗಡೆಗೆ ಸಿದ್ಧವಾಗಿದ್ದ ‘ಅವತಾರ ಪುರುಷ’ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದ್ದು, ಬೇರೆ ಸಿನಿಮಾಗಳು ಅವತಾರ ಪುರುಷನ ದಾರಿಯನ್ನೇ ಹಿಡಿಯುತ್ತಾರಾ ಎಂಬ ಆತಂಕ ಚಿತ್ರಪ್ರೇಮಿಗಳಿಗೆ ಎದುರಾಗಿದೆ. ಹೌದು ಒಮಿಕ್ರಾನ್ ಸೋಂಕು ಪ್ರಕರಣ ಮೊಟ್ಟ ಮೊದಲ ಬಾರಿ ಕರ್ನಾಟಕದಲ್ಲೇ ಕಾಣಿಸಿಕೊಂಡಿದ್ದು, ಸ್ಯಾಂಡಲ್ವುಡ್ಗೆ ಇದರ ಬಿಸಿ ಜೋರಾಗೇ ತಟ್ಟಿದೆ.