ಗಿಣಿರಾಮ ಧಾರಾವಾಹಿಯಲ್ಲಿ ನಮ್ಮ ಮಹತಿ ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಾಕ್ಕೆ ನಾಲ್ಕನೇ ಱಂಕ್ ಬಂದಿದ್ದಾಳೆ. ಈ ಸುದ್ದಿ ಕೇಳಿ ಮನೆಯವ್ರು ಫುಲ್ ಖುಷ್ ಆಗಿದ್ದಾರೆ. ಅದರಲ್ಲೂ ನಮ್ಮ ಶಿವರಾಮ ಮಹತಿಗಿಂತ ಸಂತಸ ಪಟ್ಟಿದ್ದಾನೆ ಮಾತ್ರವಲ್ಲದೆ.. ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾನೆ..
ಇದೂ ಶಿವರಾಮನ ಸೀರಿಯಲ್ ಕತೆ.. ಆದ್ರೇ ನಮ್ಮ ಶಿವರಾಮ ಅಲಿಯಾಸ್ ರಿತ್ವಿಕ್ ಇದೀಗ ರಿಯಲ್ ಲೈಫ್ನಲ್ಲೂ ಫುಲ್ ಖುಷ್ ಆಗಿದ್ದಾರೆ.. ಕಾರಣ ಹೆಂಡತಿ ಜೊತೆಗೆ ಸದ್ಯ ರಿತ್ವಿಕ್ ಟ್ರಿಪ್ನಲ್ಲಿ ಬ್ಯುಸಿಯಾಗಿದ್ದಾರೆ..
ಬೆಂಗಳೂರಿನಿಂದ ಮೈಸೂರಿಗೆ ತೆರೆಳಿ ಇದೀಗ ಮಲೆನಾಡಿನ ಸೊಬಗನ್ನೂ ಸವಿಯುತ್ತಿದ್ದಾರೆ ರಿತ್ವಿಕ್ ಜೋಡಿ.. ಸದ್ಯ ಇವರು ಕಾಫಿನಾಡು ಅಂದ್ರೆ ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದಾರೆ..ಚಳಿಯ ವಾತವರಣ ಅದರಲ್ಲೂ ಜಿಟಿ ಜಿಟಿ ಮಳೆ ಹಾಗೂ ಮುಖ್ಯವಾಗಿ ಟ್ರೀ ಹೌಸ್ನಲ್ಲಿ ತಂಪಾದ ವಾತಾವರಣವನ್ನು ಸಖತ್ ಎಂಜಾಯ್ ಮಾಡ್ತಾಯಿದ್ದಾರೆ.
ನಮ್ಮ ರಿತ್ವಿಕ್ ಟ್ರಿಪ್ ಹೋಗಿದ್ದಾರೆ ಅಂದ್ರೆ ಅದೂ ಒಂದು ಪಕ್ಷಿಗಳು ಹೆಚ್ಚಿರುವ ಸ್ಥಳ ಅಥವಾ ಪ್ರಾಣಿಗಳು ಇರುವ ಸ್ಥಳಕ್ಕೆ ಹೆಚ್ಚಾಗಿ ವಿಸಿಟ್ ಮಾಡ್ತಾನೆ ಇರ್ತಾರೆ.. ಮೊದಲು ರಿತ್ವಿಕ್ ಭೇಟಿ ನೀಡಿದ್ದು ಮೈಸೂರಿನ ರಂಗನ ತಿಟ್ಟಿಗೆ.. ರಿತ್ವಿಕೆ ವಿಶೇಷವಾಗಿ ಪಕ್ಷಿಗಳ ಮೇಲೆ ಆಸಕ್ತಿಯಿದೆ ಎಂಬುವುದು ತಿಳಿದ ವಿಚಾರ ಹಾಗಾಗಿ ಹೆಚ್ಚು ಬರ್ಡ್ಸ್ ಇರುವಂತಹ ರಂಗನತಿಟ್ಟಿಗೆ ವಿಸಿಟ್ ಮಾಡಿ ಅಲ್ಲಿ ಬರ್ಡ್ ವಾಚ್ ಮಾಡಿದ್ದಾರೆ..
ಅದಾದ ಬಳಿಕ ಕಾವೇರಿ ಹುಟ್ಟಿದ ಸ್ಥಳ ಅಂದ್ರೆ ಮಡಿಕೇರಿಗೆ ವಿಸಿಟ್ ಮಾಡಿರುವ ಇವ್ರು.. ದುಬಾರೆ ಫಾರೆಸ್ಟ್ಗೆ ತೆರಳಿ ಅಲ್ಲಿ ಆನೆಗಳನ್ನು ನೋಡಿ ಅವುಗಳ ಜೊತೆ ಒಂದಿಷ್ಟು ಸಮಯ ಕಳೆದಿದ್ದಾರೆ.. ಹಾಗೂ ಈ ಚಳಿಯಲ್ಲಿ ಕೂರ್ಗ್ನ ಫೇಮಸ್ ಫಾಲ್ಸ್ ಅಬ್ಬೆ ಫಾಲ್ಸ್ಗೆ ಕೂಡ ತೆರಳಿದ್ದಾರೆ..ಇನ್ನು ಮಡಿಕೇರಿಯಲ್ಲಿ ಮತ್ತೊಂದು ಮುಖ್ಯ ಸ್ಥಳ ಅಂದ್ರೆ ನಿಸರ್ಗಧಾಮ ಅಲ್ಲಿಗೂ ಕೂಡಾ ರಿತ್ವಿಕ್ ವಿಸಿಟ್ ಮಾಡಿದ್ದಾರೆ..
ಶೂಟಿಂಗ್ ಟ್ರಾವಲಿಂಗ್ ಟ್ರಾಫಿಕ್ ಡಸ್ಟ್ ಅದೂ ಇದೂ ಅಂತಾ ಸಖತ್ ಸ್ಟ್ರೆಸ್ನಲ್ಲಿದ್ದ ರಿತ್ವಿಕ್ ಮೂರು ದಿನ ಬ್ರೇಕ್ ತೆಗೆದುಕೊಂಡು ಸದ್ಯ ಮಲೆನಾಡಿಗೆ ತೆರಳಿ ಫುಲ್ ರಿಲ್ಯಾಕ್ಸ್ ಆಗಿದ್ದಾರೆ.