ಗೇಟ್​ ಹತ್ತುವಾಗ ತುಂಡಾದ ಬೆರಳು..ವಾಪಾಸ್​ ಬಂದು ಕಟ್​ ಆದ ಬೆರಳು ಹುಡುಕಿದ್ದೇಕೆ ಬಾಲಕ?


ದಾವಣಗೆರೆ: ಪ್ರವೇಶ ದ್ವಾರದ ಗೇಟ್​ಗೆ ಕೈ ಸಿಲುಕಿ ಬಾಲಕನೊಬ್ಬನ ಉಂಗುರ ಬೆರಳು ಕಟ್​ ಆದ ಘಟನೆ ಜಿಲ್ಲೆಯ ಹರಿಹರ ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದ ಬಳಿ ನಡೆದಿದೆ.

ಹರಿಹರ ಮರಾಠಗಲ್ಲಿಯ ನಾಗರಾಜ್ ಎಂಬುವವರ ಪುತ್ರ ಯಶವಂತಕುಮಾರ್ (15) ಬೆರೆಳು ಕಳೆದುಕೊಂಡ ಬಾಲಕ. ಕ್ರೀಡಾಂಗಣಕ್ಕೆ ಆಟವಾಡಲು ತೆರಳಿದ್ದ ಬಾಲಕ ಗಡಿಬಿಡಿಯಲ್ಲಿ ಗೇಟ್​ ಹತ್ತಿ ಹೊರಟಿದ್ದಾಗ ಆಕಸ್ಮಿಕವಾಗಿ ಗೇಟ್​ನ ಮೊನಚಾದ ಭಾಗದಲ್ಲಿ ಕೈ ಸಿಲುಕಿಕೊಂಡಿದೆ. ಈ ವೇಳೆ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಉಂಗುರ ಬೆರಳು ಕಟ್​ ಆಗಿದೆ. ಧೃತಿಗೆಡದ ಬಾಲಕ ಕಟ್ ಆದ ಬೆರಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

ಆತನನ್ನು ಗಮನಿಸಿದ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪ್ರಥಮ ಚಿಕಿತ್ಸೆ ಮಾಡಿದ ವೈದ್ಯರು ಕಟ್​ ಆದ ಬೆರಳನ್ನು ತರಲು ಸೂಚಿಸಿದ್ದರು ಎನ್ನಲಾಗಿದ್ದು ವಾಪಾಸ್​ ಬಂದ ಬಾಲಕ ಕಟ್​ ಆಗಿದ್ದ ಬೆರಳನ್ನು ಹುಡುಕಿ ಆಸ್ಪತ್ರೆಗೆ ಒಯ್ದಿದ್ದಾನೆ. ಸದ್ಯ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

News First Live Kannada


Leave a Reply

Your email address will not be published. Required fields are marked *