ಛೇ ಇದೆಂಥಾ ಅವಸ್ಥೆ! ಮೊದಲ ಬಾರಿ IPS​​​​ ಅಧಿಕಾರಿ ವಿರುದ್ಧ ರೆಡ್​​ ಕಾರ್ನರ್​​ ನೋಟಿಸ್ ಯಾಕೆ ಗೊತ್ತಾ?


ಹಫ್ತಾ ವಸೂಲಿ ಪ್ರಕರಣವೊಂದರಲ್ಲಿ ಮುಂಬೈ ಮಾಜಿ ಪೊಲೀಸ್ ಕಮೀಷನರ್​​ ಪರಮ್ ಬೀರ್ ಸಿಂಗ್ ವಿರುದ್ಧ ಕೋರ್ಟ್​ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ. ಹಲವು ಬಾರಿ ನೋಟಿಸ್​​ ನೀಡಿದರೂ ಕೋರ್ಟ್​ಗೆ ಹಾಜರಾಗದೆ ಪರಮ್​​ ಬೀರ್​​ ಸಿಂಗ್​ ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಜಾರಿಗೊಳಿಸುತ್ತಿರುವ ಮೂರನೇ ಬಂಧನ ವಾರಂಟ್ ಇದಾಗಿದೆ. ನ್ಯಾಯಾಲಯಕ್ಕೆ ನಿರಂತರವಾಗಿ ಹಾಜರಾಗದ ಪರಮ್​​ ಬೀರ್​​ ಸಿಂಗ್​​ ಒಬ್ಬ ಪಲಾಯನಗಾರ ಎಂದು ಕೋರ್ಟ್‌ ಘೋಷಿಸಿದೆ. ಸದ್ಯದಲ್ಲೇ ಇವರಿಗೆ ರೆಡ್​​ ಕಾರ್ನರ್​​ ನೋಟಿಸ್​​ ಕೂಡ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಹೀಗಾದರೆ, ದೇಶದಲ್ಲೇ ಮೊದಲ ಬಾರಿಗೆ ರೆಡ್ ಕಾರ್ನರ್​​​​ ನೋಟಿಸ್​​ ಜಾರಿಗೆ ಒಳಗಾದ ಐಪಿಎಸ್​​ ಅಧಿಕಾರಿ ಇವರಾಗಲಿದ್ದಾರೆ.

ಇನ್ನು, ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ 100 ಕೋಟಿ ಹಫ್ತಾ ವಸೂಲಿ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು. ಹೀಗಾಗಿ ಹಫ್ತಾ ವಸೂಲಿಗೆ ಮುಂದಾಗಿದ್ದೆ ಎಂದಿದ್ದರು ಪರಮ್ ಬೀರ್ ಸಿಂಗ್. ಈ ಸಂಬಂಧ ಜುಲೈ 23 ರಂದು ಪರಮ್ ಬೀರ್ ಸಿಂಗ್​​ ವಿರುದ್ಧ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಮುಂಬೈ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಸೆಮಿಫೈನಲ್​​ ಕದನ: ಆಸ್ಟ್ರೇಲಿಯಾಗೆ 177 ರನ್​​​​ ಟಾರ್ಗೆಟ್​​ ನೀಡಿದ ಪಾಕ್​​

News First Live Kannada


Leave a Reply

Your email address will not be published. Required fields are marked *