ಶಿವಗಂಗಾ ಪಾಲ್ಸ್ಗೆ ಪ್ರವಾಸಕ್ಕೆ ತೆರಳಿದ್ದ ಯುವತಿ ಕಾಲುಜಾರಿ ಬಿದ್ದು ನೀರುಪಾಲಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿವಗಂಗಾ ಪಾಲ್ಸ್ನಲ್ಲಿ ನಡೆದಿದೆ.

ಆರೋಪಿ ಜಗದೀಶ್, ಪತ್ನಿ ಅಶ್ವಿನಿ
ಹಾಸನ: ಜೀವನಾಂಶ ಕೇಳಿದ್ದ ಪತ್ನಿಯನ್ನು ಕುತ್ತಿಗೆ ಸೀಳಿ ಪತಿಯೇ ಹತ್ಯೆಗೈದ (murder) ಪ್ರಕರಣ ಸಂಬಂಧ ಹಂತಕ ಪತಿ ಜಗದೀಶ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹಂತಕ ಪತಿ ಊರೂರು ತಿರುಗುತ್ತಿದ್ದ. ಜಿಲ್ಲೆಯ ಬೇಲೂರು ಪಟ್ಟಣದ ಪಂಪ್ ಹೌಸ್ ರಸ್ತೆಯಲ್ಲಿ ಮಹಿಳೆ ಅಶ್ವಿನಿ(36) ಕೊಲೆಯಾಗಿತ್ತು. ಜುಲೈ 20ರ ಸಂಜೆ ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಕೊಲೆಯಾಗಿರೊ ವಿಚಾರ ಬೆಳಕಿಗೆ ಬಂದಿದೆ. ಮದ್ಯಾಹ್ನ ಊಟಕ್ಕೆಂದು ತಾನೇ ಪತ್ನಿಯನ್ನು ಕರೆತಂದು ಮನೆಯಲ್ಲಿ ಇರಿದು ಕೊಂದು ಪಾಪಿ ಪತಿ ಎಸ್ಕೇಪ್ ಆಗಿದ್ದ. ಕೊಲೆ ನಡೆದ ಹತ್ತು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.