ಜಾರ್ಖಂಡ್ನ ರಾಂಚಿಯ ಜೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ 8 ವಿಕೆಟ್ ಭರ್ಜರಿ ಗೆಲವು ಸಾಧಿಸಿದೆ. ನ್ಯೂಜಿಲೆಂಡ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಟೀಂ ಇಂಡಿಯಾ ಕೆ.ಎಲ್ ರಾಹುಲ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 17.1 ಓವರ್ನಲ್ಲಿ 154 ರನ್ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಟಿ-20 ಸರಣಿಯನ್ನ ತನ್ನದಾಗಿಸಿಕೊಂಡಿದೆ.
2ನೇ ಪಂದ್ಯದಲ್ಲೂ ಟಾಸ್ ಸೋತು ಬ್ಯಾಟಿಂಗ್ಗಿಳಿದ ಕಿವೀಸ್, ಸ್ಫೋಟಕ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಮತ್ತು ಡ್ಯಾರಿಲ್ ಮಿಚೆಲ್, ಟೀಮ್ ಇಂಡಿಯಾ ಬೌಲರ್ಗಳಿಗೆ ಹಿಗ್ಗಾಮುಗ್ಗಾ ದಂಡಿಸಿದ್ರು. ಪೋರ್-ಸಿಕ್ಸ್ಗಳ ಮೂಲಕ ಅಬ್ಬರಿಸುತ್ತಿದ್ದ ಈ ಜೋಡಿಯ ಜೊತೆಯಾಟಕ್ಕೆ ದೀಪಕ್ ಚಹರ್ ಬ್ರೇಕ್ ಹಾಕಿದ್ರು. ಅತ್ತ 31 ರನ್ ಗಳಿಸಿ ಗಪ್ಟಿಲ್ ಔಟಾದ್ರೆ, ಬಳಿಕ ಕಣಕ್ಕಿಳಿದ ಮಾರ್ಕ್ ಚಾಪ್ಮನ್ 3 ಬೌಂಡರಿ ಸಿಡಿಸಿ ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಮಿಚೆಲ್ 31ರನ್ ಗಳಿಸಿ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟುತ್ತಿದ್ರು. ಆದ್ರೆ ಈ ವೇಳೆ ಬೌಲರ್ಗಳು ಕಿವೀಸ್ ಮೇಲೆ ಮಾರಕ ದಾಳಿ ನಡೆಸಿದ್ರು. ಮಿಚೆಲ್ ಆಟಕ್ಕೆ ಡೆಬ್ಯುಟೆಂಟ್ ಹರ್ಷಲ್ ಪಟೇಲ್ ಬ್ರೇಕ್ ಹಾಕಿದ್ರೆ, ಸೀಪರ್ಟ್ರನ್ನ ಅಶ್ವಿನ್ ಹೊರಹಾಕಿದ್ರು. ಇನ್ನು 1ರನ್ ಗಳಿಸಿದ್ದಾಗ ಜೀವದಾನ ಪಡೆದ ಗ್ಲೇನ್ ಫಿಲಿಫ್ಸ್, 3ಸಿಕ್ಸ್ಗಳ ನೆರವಿನಿಂದ 34ರನ್ ಕೊಡುಗೆ ನೀಡಿದ್ರು. ಈ ವೇಳೆ ಹರ್ಷಲ್ ಅಟ್ಯಾಕಿಂಗ್ ಬೌಲಿಂಗ್ಗೆ ಫಿಲಿಪ್ಸ್ ಹೊರ ನಡೆದ್ರು. ಇದರ ಬೆನ್ನಲ್ಲೇ ನಿಶಾಮ್ ಕೂಡ ಔಟಾದ್ರು. ಅಂತಿಮವಾಗಿ ಕಿವೀಸ್, 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕ್ತು.
ನ್ಯೂಜಿಲೆಂಡ್ ನೀಡಿದ 154 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ, ಸಾಲಿಡ್ ಓಪನಿಂಗ್ ಪಡೆಯಿತು. ರಾಹುಲ್-ರೋಹಿತ್ ಕೂಡ ಕಿವೀಸ್ ಬೌಲರ್ಗಳಿಗೆ ಚೆನ್ನಾಗಿಯೇ ಚಚ್ಚಿದರು. ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದ ಟೀಮ್ ಇಂಡಿಯಾ ಓಪನರ್ಸ್, ಪವರ್ ಪ್ಲೇನಲ್ಲಿ 45 ರನ್ಗಳ ಕೊಡುಗೆ ನೀಡಿದ್ರು. ಇದರ ಬಳಿಕವೂ ಅಬ್ಬರಿಸಿದ ಈ ಜೋಡಿ, 10 ಓವರ್ಗಳಲ್ಲಿ 79 ರನ್ ಕಲೆ ಹಾಕಿ, ಕಿವೀಸ್ ಬೌಲರ್ಗಳಿಗೆ ಕಂಟಕವಾಗಿ ಪರಿಣಮಿಸಿದ್ರು.
ನಾಯಕ-ಉಪನಾಯಕನ ಆರ್ಭಟಕ್ಕೆ ಬೆಚ್ಚಿದ ಬೌಲರ್ಗಳು, ಹಿಡಿತ ಸಾಧಿಸುವಲ್ಲಿ ವಿಫಲರಾದ್ರು. ಹೀಗಾಗಿ ಈ ಜೋಡಿ ಶತಕದ ಜೊತೆಯಾಟವಾಡ್ತು. ಈ ವೇಳೆ ತಮ್ಮ 16ನೇ ಅರ್ಧಶತಕ ಮತ್ತು ರೋಹಿತ್ ತಮ್ಮ 25ನೇ ಅರ್ಧಶತಕ ಸಿಡಿಸಿದ್ರು. ಆದ್ರೆ ಈ ಜೋಡಿಯನ್ನ ಟಿಮ್ ಸೌಥಿ ಬೇರ್ಪಡಿಸಿದ್ರು. ಇವರ ಹಿಂದೆಯೇ ಸೂರ್ಯ ಕುಮಾರ್ ಕೂಡ ಔಟಾದ್ರು. ಕೊನೆಗೆ ವೆಂಕಟೇಶ್ ಅಯ್ಯರ್, ರಿಷಭ್ ಪಂತ್ 17.2 ಓವರ್ಗಳಲ್ಲೇ ತಂಡಕ್ಕೆ ಗೆಲುವು ತಂದುಕೊಟ್ರು. ಆ ಮೂಲಕ 7 ವಿಕೆಟ್ಗಳಿಂದ ಭರ್ಜರಿಯಾಗಿ ಗೆಲ್ಲೋದ್ರೊಂದಿಗೆ ಭಾರತ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ.
The post ಟಿ-20 ಸರಣಿ ಗೆದ್ದ ಭಾರತ: ಕಿವೀಸ್ ಆಟಗಾರರನ್ನ ಹೆಂಗೆಲ್ಲಾ ಬೆಂಡು ಎತ್ತಿದ್ರು ಗೊತ್ತಾ..? appeared first on News First Kannada.