ಟಿ20 ಸರಣಿ​​ ವೈಟ್​​ವಾಶ್​​.. ವಿಂಡೀಸ್​​ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ


ಅಂತಿಮ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ 17 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ರೋಹಿತ್​ ಪಡೆ ವೈಟ್​ವಾಶ್​ ಮಾಡಿದೆ. ಭಾರತ ಮೊದಲ ಪಂದ್ಯದಲ್ಲಿ 6 ವಿಕೆಟ್​, 2ನೇ ಟಿ20ಯಲ್ಲಿ 8 ರನ್​ಗಳಿಂದ ರೋಚಕ ಗೆದ್ದಿತ್ತು.

ಅವಕಾಶ ಕೈ ಚೆಲ್ಲಿದ ಋತುರಾಜ್​, ಭರವಸೆ ಇನ್ನಿಂಗ್ಸ್​ ಕಟ್ಟದ ಶ್ರೇಯಸ್​​​​..!

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಟೀಮ್​ ಇಂಡಿಯಾ, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯ್ತು. ಸರಣಿಯಲ್ಲಿ ಚೊಚ್ಚಲ ಅವಕಾಶ ಪಡೆದ ಋತುರಾಜ್​ ಗಾಯಕ್ವಾಡ್​​ ಬೌಂಡರಿ ಸಿಡಿಸಿ ಔಟಾದ್ರೆ, ಶ್ರೇಯಸ್​ ಅಯ್ಯರ್​ ಭರವಸೆಯ ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದ್ರು. ಇನ್ನು ಇಶಾನ್ ಕಿಶಾನ್​ ಸ್ಲೋ ಇನ್ನಿಂಗ್ಸ್​​​​​​​ ಕಟ್ಟಿ 31 ರನ್​ಗಳಿಗೆ ಆಟ ಅಂತ್ಯಗೊಳಿಸಿದ್ರು. ಮಿಡಲ್​ ಆರ್ಡನ್​​ನಲ್ಲಿ ಬ್ಯಾಟ್​ ಬೀಸಿದ ರೋಹಿತ್​ ಶರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಹಾಗಾಗಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು.

ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಸೂರ್ಯಕುಮಾರ್​​ ಯಾದವ್​..!

ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ಸೂರ್ಯಕುಮಾರ್ ಅಕ್ಷರಶಃ ನೆರವಾದ್ರು. ಆರಂಭದಿಂದಲೇ ಅಬ್ಬರಿಸಲು ಶುರುವಿಟ್ಟ ಸೂರ್ಯ, ಭರ್ಜರಿ 7 ಸಿಕ್ಸ್​ ಸಿಡಿಸಿ ತಂಡದ ಮೊತ್ತ ಏರಿಕೆಗೆ ಕಾರಣರಾದ್ರು. 28 ಎಸೆತಗಳಲ್ಲೇ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಸೂರ್ಯ, ಪಂದ್ಯದ ಕೊನೆ ಬಾಲ್​ನಲ್ಲಿ ಔಟಾದ್ರು. ಅತ್ತ ಸೂರ್ಯ ಘರ್ಜಿಸಿದ್ರೆ, ಇತ್ತ ಸೂರ್ಯಗೆ ಸಾಥ್​ ನೀಡಿದ ವೆಂಕಟೇಶ್ ಅಯ್ಯರ್, ಅಜೇಯ 35 ರನ್​ ಗಳಿಸಿ ಮತ್ತೊಮ್ಮೆ ಮಿಂಚಿದ್ರು. 5ನೇ ವಿಕೆಟ್​ಗೆ​ ಈ ಜೋಡಿಯಿಂದ 37 ಎಸೆತಗಳಲ್ಲಿ 91 ರನ್​ಗಳು ಹರಿದು ಬಂದವು. ಅಂತಿಮವಾಗಿ ಭಾರತ 5 ವಿಕೆಟ್​ ನಷ್ಟಕ್ಕೆ 184 ಗಳಿಸ್ತು.

ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದ ವಿಂಡೀಸ್​ ಬ್ಯಾಟರ್ಸ್​​..!

ಭಾರತ ನೀಡಿದ್ದ ಬೃಹತ್​ ಟಾರ್ಗೆಟ್​ ಬೆನ್ನಟ್ಟಿದ ವಿಂಡೀಸ್​, ಆರಂಭದಲ್ಲೇ ವಿಕೆಟ್​ ಕಳೆದುಕೊಂಡಿತು. ಕೈಲ್​ ಮೇಯರ್​, ಶಾಯ್​ಹೋಪ್​, ಪೊಲಾರ್ಡ್​, ಜೇಸನ್​ ಹೋಲ್ಡರ್​​​ ಒಂದಂಕಿಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ರೆ, ರಾವ್​ಮನ್​ ಪೊವೆಲ್​ ಸ್ವಲ್ಪ ಹೊತ್ತು ಘರ್ಜಿಸಿ 25ರನ್​ಗೆ ಆಟ ಮುಗಿಸಿದ್ರು. ಇದರ ಬೆನ್ನಲ್ಲೇ ರಸ್ಟನ್​ ಚೇಸ್​ ಕೂಡ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದ್ರು. ಈ ಹಿನ್ನೆಲೆ ಪಂದ್ಯದ ಮೇಲೆ ಟೀಮ್​ ಇಂಡಿಯಾ ಹಿಡಿತ ಸಾಧಿಸಿತ್ತು.

ನಿಕೋಲಸ್​​ ಪೂರನ್ ಏಕಾಂಗಿ ಹೋರಾಟ ವ್ಯರ್ಥ​..!

ಒಂದೆಡೆ ವಿಕೆಟ್​ ಉರುಳುತ್ತಿದ್ದರೂ, ನಿಕೋಲಸ್​ ಪೂರನ್​ ಭರ್ಜರಿ ಆಟವಾಡಿ ಸರಣಿಯಲ್ಲಿ ಹ್ಯಾಟ್ರಿಕ್​ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಆದ್ರೆ 61 ರನ್​ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾಗಿ ಪಂದ್ಯವನ್ನ ಜಯದತ್ತ ಕೊಂಡೊಯುವಲ್ಲಿ ಫೇಲ್​ ಆದ್ರು. ಬಳಿಕ ರೋಮಾರಿಯೋ ಶೆಫರ್ಡ್ ಕೂಡ ವಿಕೆಟ್​ ಒಪ್ಪಿಸಿದ್ರು. ಆದ್ರೆ ವಿಂಡೀಸ್​ ಗೆಲ್ಲಲು ಕೊನೇ ಓವರ್​​​ನಲ್ಲಿ 23 ರನ್​ಗಳ ಅಗತ್ಯ ಇತ್ತು. ಈ ವೇಳೆ ಬೌಂಡರಿ ಸಿಡಿಸಿ ಡ್ರೇಕ್ಸ್​ ಔಟಾದ್ರು. ಆದ್ರೆ ಗಳಿಸಿದ್ದು ಕೇವಲ 5ರನ್​ಗಳು ಮಾತ್ರ. ಆ ಮೂಲಕ ಟೀಮ್​ ಇಂಡಿಯಾ 17 ರನ್​ಗಳಿಂದ ಪಂದ್ಯವನ್ನ ಗೆದ್ದು ಬೀಗಿತು.

ಟೀಮ್​ ಇಂಡಿಯಾ ಪರ ಶಾರ್ದೂಲ್​, ದೀಪಕ್ ಚಹರ್, ವೆಂಕಟೇಶ್​ ಅಯ್ಯರ್ ತಲಾ 2 ವಿಕೆಟ್​ ಪಡೆದ್ರೆ, ಹರ್ಷಲ್​ ಪಟೇಲ್​ 3 ವಿಕೆಟ್​ ಕಬಳಿಸಿ ಮಿಂಚಿದ್ರು.

News First Live Kannada


Leave a Reply

Your email address will not be published. Required fields are marked *