ಟೆಸ್ಟ್​ ತಂಡಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಯ್ಕೆ ಹಿಂದಿದೆ ಒಂದು ‘ವಿಶೇಷ ಕಾರಣ’ 


ಕರ್ನಾಟಕ ತಂಡದ ಸ್ಟಾರ್​ ವೇಗಿ ಪ್ರಸಿದ್ಧ್​ ಕೃಷ್ಣ, ಭಾರತ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ ಯುವ ವೇಗಿಯ ಆಯ್ಕೆಗೆ ವಿಶೇಷ ಕಾರಣವಿದೆ. ಹಾಗೇ ಇದರ ಹಿಂದೆ ಬಿಸಿಸಿಐ ಮಾಸ್ಟರ್​​ ಪ್ಲಾನ್ ಕೂಡ ರೂಪಿಸಿದೆ. ಅದೇನಂತಿರಾ. ಇಲ್ಲಿದೆ ಡಿಟೇಲ್ಸ್​.

 

ನ್ಯೂಜಿಲೆಂಡ್​​​​​ ಟೆಸ್ಟ್​​​ ಸರಣಿಗೆ ಟೀಮ್​ ಇಂಡಿಯಾ 16 ಸದಸ್ಯರ ತಂಡವನ್ನ, ಪ್ರಕಟಿಸಿದೆ. ಅಜಿಂಕ್ಯ ರಹಾನೆ ನೇತೃತ್ವದ ಈ ಯುವ ಸೈನ್ಯದಲ್ಲಿ, ನಿರೀಕ್ಷೆಯಂತೆ ಕೆಲವು ಅಚ್ಚರಿ ಹೆಸರುಗಳಿವೆ. ಅದರಂತೆ ಕರ್ನಾಟಕದ ಯುವ ವೇಗಿ ಪ್ರಸಿದ್ಧ್​​ ಕೃಷ್ಣ ಕೂಡ ಒಬ್ಬರು. 2011ರ ಬಳಿಕ ಭಾರತ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದ ಕರ್ನಾಟಕದ ಮೊದಲ ವೇಗಿ ಕೂಡ ಹೌದು. ಪೇಸ್, ಇಂಪ್ರೆಸ್ಸಿವ್​ ​ಬೌಲಿಂಗ್ ಆ್ಯಂಡ್​ ಪ್ರಾಮಿಸಿಂಗ್​ ಸ್ಪೆಲ್ಲೇ, ಈತನ ಆಯ್ಕೆಗೆ ಕಾರಣ. ಹಾಗೆ ಈತನ ಆಯ್ಕೆಯ ಹಿಂದೆ ಮಾಸ್ಟರ್​ ಪ್ಲಾನ್​ ಕೂಡ ಇದೆ.

ಇದೇ ವರ್ಷ ಟೀಮ್​ ಇಂಡಿಯಾಗೆ ಡೆಬ್ಯೂ ಮಾಡಿದ್ದ ಪ್ರಸಿದ್ಧ್​​ ಕೃಷ್ಣ
ಯೆಸ್​​, ಪ್ರಸಿದ್ಧ್​ ಕೃಷ್ಣ ಟೀಮ್​​ ಇಂಡಿಯಾಗೆ ಡೆಬ್ಯೂ ಮಾಡಿದ್ದು ಇದೇ ವರ್ಷ. ಅದು ಏಕದಿನ ಕ್ರಿಕೆಟ್​​ಗೆ. ಇಂಗ್ಲೆಂಡ್​​ ವಿರುದ್ಧ ಅಖಾಡಕ್ಕಿಳಿದಿದ್ದ ಪ್ರಸಿದ್ಧ್​, ಸಿಕ್ಕ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡಿದ್ರು. ಇತ್ತೀಚೆಗೆ ನಡೆದ ಇಂಗ್ಲೆಂಡ್​ ಟೆಸ್ಟ್​​ ಸರಣಿಯಲ್ಲೂ ಈ ಸ್ಪೀಡ್​ಸ್ಟರ್​, ಚಾನ್ಸ್​​ ಪಡೆದಿದ್ರು. ಸ್ಟ್ಯಾಂಡ್​​ಬೈ ಆಟಗಾರನಾಗಿದ್ದ ಈತ​, ಸರಣಿಯ 4ನೇ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಂಡ್ರು. ಆದ್ರೆ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಚಾನ್ಸ್​ ಸಿಕ್ಕಿರಲಿಲ್ಲ.

ಇಂಗ್ಲೆಂಡ್​ ಸರಣಿಯ ಬಳಿಕ, ಪ್ರಮುಖ ಟೆಸ್ಟ್​ ತಂಡದಲ್ಲಿ ಪ್ರಸಿದ್ಧ್ ಅವಕಾಶ​ ಪಡೆದಿದ್ದಾರೆ. ಕಿವೀಸ್​ ಸರಣಿಗೆ​ ಬೂಮ್ರಾ, ಶಮಿ, ಶಾರ್ದೂಲ್​ರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಅಲಭ್ಯತೆಯಲ್ಲಿ ಪ್ರಸಿದ್ಧ್, ಚಾನ್ಸ್​ ಪಡೆದುಕೊಂಡಿದ್ದಾರೆ. ಆದ್ರೆ BCCI ಮತ್ತೊಂದು ಯೋಜನೆ ಕೂಡ ರೂಪಿಸಿದೆ. ಅನುಭವಿ ವೇಗಿಗಳ ಅಲಭ್ಯತೆ ಎದುರಾದಾಗ, ಪ್ರಸಿದ್ಧ್​ರನ್ನ ಕಣಕ್ಕಿಳಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ. ಅಷ್ಟೆ ಅಲ್ಲದೆ, ಭವಿಷ್ಯದ ಟೆಸ್ಟ್​ ತಂಡಕ್ಕೆ ಈಗಿನಿಂದಲೇ ಪ್ರಸಿದ್ಧ್​ರನ್ನ ರೆಡಿ ಮಾಡಲಾಗ್ತಿದೆ. ಅನುಭವಿಗಳ ವರ್ಕ್​​​ಲೋಡ್​​ ಕಡಿಮೆ ಮಾಡುವುದು ಬಿಸಿಸಿಐ ಯೋಜನೆಯಲ್ಲಿದೆ.

ಪ್ರಸಿದ್ಧ್​​ರನ್ನೇ ಆಯ್ಕೆ ಮಾಡಲು ನಿಖರವಾದ ಕಾರಣವೇನು..?
ಪ್ರಸಿದ್ಧ್ ಉತ್ತಮ ವೇಗವನ್ನ ಹೊಂದಿದ್ದಾರೆ. ಹೆಚ್ಚು ಎತ್ತರ ಇರುವ ಹಿನ್ನೆಲೆ, ಉತ್ತಮ ಬೌನ್ಸ್ ಎಸೆಯಬಲ್ಲರು. ಹಾಗೆ ಪೇಸ್​, ಸ್ವಿಂಗ್​, ಅಟ್ಯಾಕಿಂಗ್​ ಬೌಲಿಂಗ್​​ ತಂಡಕ್ಕೆ ನೆರವಾಗುತ್ತದೆ. ಹಾಗಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದಷ್ಟೆ ಅಲ್ಲ, IPL​ನಲ್ಲೂ ಮಾರಕ ಬೌಲಿಂಗ್​ ದಾಳಿ ಮತ್ತು ರಣಜಿ ಕ್ರಿಕೆಟ್​​ನಲ್ಲಿ ವಿಕೆಟ್​​ ಟೇಕಿಂಗ್​​ ಸ್ಪೆಲ್​​​ಗಳ ಮೂಲಕ, ಪ್ರಸಿದ್ಧ್ ಗಮನ ಸೆಳೆದಿದ್ದಾರೆ. ಪ್ರಸಿದ್ಧ್​ರ ಸಂಘಟಿತ ಬೌಲಿಂಗ್​ಗೆ ಫಿದಾ ಆಗಿದ್ದ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್​, ಈ ಹಿಂದೆ ಗುಣಗಾನ ಮಾಡಿದ್ರು.

ಇದನ್ನೂ ಓದಿ: ಕಿಂಗ್ ಕೊಹ್ಲಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಕೋಚ್​ ರವಿ ಶಾಸ್ತ್ರಿ..!

ಟೆಸ್ಟ್​​ಗೆ ಪರಿಗಣಿಸಬೇಕಾದ ವ್ಯಕ್ತಿ
ಪ್ರಸಿದ್ಧ್​ ಕೃಷ್ಣ ಅವರ ಪೇಸ್ ಆ್ಯಂಡ್​​ ಸೀಮ್ ಅದ್ಭುತ. ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್​​ ಮಾಡುವ ಪರಿಣಿತಿ ಅವರಿಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟ್ಸ್​​ಮನ್​​​ಗಳಿಗೆ ಕಾಡುವ ಸೀಮ್​ ಬೌಲಿಂಗ್​ ಹೊಂದಿದ್ದಾರೆ. ಹಾಗಾಗಿ ಅಪರೂಪದ ಬೌಲಿಂಗ್​​ ಕೌಶಲ್ಯ ಹೊಂದಿರುವ ಪ್ರಸಿದ್ಧ್​ರನ್ನ ಟೆಸ್ಟ್​ ತಂಡಕ್ಕೆ ಆಯ್ಕೆ ಸಮಿತಿ ಪರಿಗಣಿಸಲೇಬೇಕು.

ಇದನ್ನೂ ಓದಿ: ವೆಂಕಟೇಶ್ ಅಯ್ಯರ್ ಪರ​​ VVS ಲಕ್ಷ್ಮಣ್ ಬ್ಯಾಟ್​; ಮಾಜಿ ಕ್ರಿಕೆಟಿಗನಿಂದ ‘ಬಂಗಾರ’ದಂಥ ಸಲಹೆ

ಸುನಿಲ್​ ಗವಾಸ್ಕರ್, ಮಾಜಿ ಕ್ರಿಕೆಟಿಗ
ಈ ಕಾರಣಗಳಿಂದಲೇ ಪ್ರಸಿದ್ಧ್​ ಚಾನ್ಸ್​ ಪಡೆದುಕೊಂಡಿದ್ದಾರೆ. ಸದ್ಯ ಅನುಭವಿಗಳ ಅಲಭ್ಯತೆಯಲ್ಲಿ ಅವಕಾಶ ಪಡೆದಿರುವ ಪ್ರಸಿದ್ಧ್​, ಈ ಸಲ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಹಾಗೇ ತವರಿನಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆ ಹೊಂದಿದ್ದಾರೆ.

ಇದನ್ನೂ ಓದಿ: ನೀವು ನಂಬ್ಲೆ ಬೇಕು: ಚೆನ್ನೈ ಜಲಗಂಡಾಂತರಕ್ಕೆ ಕಾರಣವಾಗಿದ್ದೆ ಪ್ಲಾಸ್ಟಿಕ್.. ಹೇಗೆ ಗೊತ್ತಾ..?

News First Live Kannada


Leave a Reply

Your email address will not be published. Required fields are marked *