ಡ್ರಗ್​ ಕೇಸ್​ ಬಳಿಕ ಹೆಚ್ಚಾಯ್ತಂತೆ ಆರ್ಯನ್ ಜನಪ್ರಿಯತೆ; ಅದಕ್ಕೆ ಶಾರೂಖ್ ಖಾನ್ ಏನ್ಮಾಡಿದ್ರು ಗೊತ್ತಾ..?


ಮುಂಬೈ: ಆರ್ಯನ್​ ಖಾನ್​ ಬಿಡುಗಡೆ ನಂತರ ನಟ ಶಾರುಖ್​ ಖಾನ್​ ತಮ್ಮ ಮಗನ ವಿಚಾರವಾಗಿ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಆರ್ಯನ್​ ಚಲನವಲನ ಹಾಗೂ ಭದ್ರತೆಯ ಬಗ್ಗೆ ತೀವ್ರ ಯೋಚನೆ ಮಾಡಿದ ಕಿಂಗ್​ ಖಾನ್​, ಆರ್ಯನ್​ ಖಾನ್​ಗೆ ಭದ್ರತೆಗಾಗಿ ಬಾಡಿಗಾರ್ಡ್​ ನೇಮಿಸಲು ​ಹುಡುಕಾಟ ನಡೆಸಿದ್ದಾರೆ. ಈ ಮೊದಲು ಜನರಿಗೆ ಆರ್ಯನ್​​ರ ಮುಖ ಪರಿಚಯ ಇರದ ಕಾರಣ, ಪಾರ್ಟಿ ಅಥವಾ ಫ್ರೆಂಡ್ಸ್​ ಜೊತೆ ಸುತ್ತಲು ಆರ್ಯನ್​ ಒಬ್ಬರೇ ಹೋಗುತ್ತಿದ್ರು. ಆದ್ರೀಗ ಡ್ರಗ್​ ಪ್ರಕರಣದ ನಂತರ ಆರ್ಯನ್​ರನ್ನು ಎಲ್ಲರೂ ಗುರುತಿಸುತ್ತಿದ್ದು, ಈ ಹಿನ್ನಲೆ ಆರ್ಯನ್​ ರಕ್ಷಣೆಗೆ ಶಾರುಖ್​ ಬಾಡಿಗಾರ್ಡ್​ ನೇಮಕ ಮಾಡಿದ್ದಾರೆ.

ಜಾಮೀನು ನಿಯಮದಂತೆ ಆರ್ಯನ್​ ದಿನನಿತ್ಯ ಪೊಲೀಸ್​​ ಠಾಣೆಗೆ ಬಂದು ಸಹಿ ಮಾಡಬೇಕು. ಇನ್ನು ನೆನ್ನೆ ಆರ್ಯನ್​ ಖಾನ್​ ಹುಟ್ಟು ಹಬ್ಬವಿದ್ದರೂ ತಮ್ಮ ಬಾಡಿಗಾರ್ಡ್​ಗಳ ಜೊತೆ ಠಾಣೆಗೆ ಆಗಮಿಸಿ ಸಹಿ ಮಾಡಿ ತೆರಳಿದ್ದಾರೆ.

The post ಡ್ರಗ್​ ಕೇಸ್​ ಬಳಿಕ ಹೆಚ್ಚಾಯ್ತಂತೆ ಆರ್ಯನ್ ಜನಪ್ರಿಯತೆ; ಅದಕ್ಕೆ ಶಾರೂಖ್ ಖಾನ್ ಏನ್ಮಾಡಿದ್ರು ಗೊತ್ತಾ..? appeared first on News First Kannada.

News First Live Kannada


Leave a Reply

Your email address will not be published. Required fields are marked *