ತಾಯಿಯ 7.5 ಕೆಜಿ ಚಿನ್ನ, ವಜ್ರಾಭರಣ ಕದ್ದು ಎಸ್ಕೇಪ್​​ ಆದ ಮಗಳು; ಎಫ್​​​ಐಆರ್​​ ದಾಖಲು


ಬೆಂಗಳೂರು: ಮಗಳು 4 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್​ ಆಗಿದ್ದಾಳೆಂದು ತಾಯಿ ಸ್ವತಃ ಮಗಳ ಮೇಲೆ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಿಸಿರುವ ವಿಲಕ್ಷಣ ಘಟನೆ ಜೆಪಿ ನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿ ವಿಜಯಲಕ್ಷ್ಮೀ ಎಂಬುವವರು ಮಗಳು ತೇಜವಂತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು  7.5 ಕೆಜಿ ಚಿನ್ನ, ವಜ್ರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಏನಿದು ಪ್ರಕರಣ?
ತಾಯಿ ವಿಜಯಲಕ್ಷ್ಮಿ ಇತ್ತೀಚಿಗೆ ಅನಾರೋಗ್ಯದಿಂದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಈ ವೇಳೆ ಚಿನ್ನ ಮತ್ತು ವಜ್ರಾಭರಣಗಳನ್ನು ತನ್ನ ಮನೆಯಲ್ಲಿ ಭದ್ರವಾಗಿಡುವಂತೆ ಸೂಚಿಸಿ ಮಗಳ ಕೈಗಿಟ್ಟಿದ್ದಾರೆ. ಆಸ್ಪತ್ರೆಯಿಂದ ವಾಪಾಸ್ ಬಂದು ನೋಡಿದಾಗ ಓಡವೆಗಳು ಇಲ್ಲದಿರೋದು ಪತ್ತೆಯಾಗಿದೆ. ಚಿನ್ನಾಭರಣಗಳು ಎಲ್ಲಿ ಎಂದು ಕೇಳಲು ಮಗಳಿಗೆ ಪೋನ್​​ ಮಾಡಿದರೆ ಮೊಬೈಲ್​ ಬಂದ್​ ಆಗಿದೆಯಂತೆ. ಇದರಿಂದ ಗಾಬರಿಗೊಂಡ ತಾಯಿ ಠಾಣೆ ಮೆಟ್ಟಿಲು ಹತ್ತಿ ಪುತ್ರಿಯ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಇನ್ನು ದೂರು ಪಡೆದು ಎಫ್​ಐಆರ್​ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಗಳಿಗಾಗಿ ಶೋಧ ಆರಂಭಿಸಿದ್ದಾರೆ.

The post ತಾಯಿಯ 7.5 ಕೆಜಿ ಚಿನ್ನ, ವಜ್ರಾಭರಣ ಕದ್ದು ಎಸ್ಕೇಪ್​​ ಆದ ಮಗಳು; ಎಫ್​​​ಐಆರ್​​ ದಾಖಲು appeared first on News First Kannada.

News First Live Kannada


Leave a Reply

Your email address will not be published. Required fields are marked *