ಸಿಲೆಬಸ್ ನಲ್ಲಿನಲ್ಲಿ ಕರ್ನಾಟಕದ ಇತಿಹಾಸವನ್ನ ಮರೆಮಾಚುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ,

ತುಂಗಭದ್ರಾ ನದಿ
ಬೆಂಗಳೂರು: ಟಿಪ್ಪು ಪಠ್ಯ ಪರಿಷ್ಕರಣೆ ವಿವಾದ ತಣ್ಣಗಾಯ್ತು. ಆದ್ರೆ, ಇದೀಗ ಕೇಂದ್ರೀಯ ಸಿಲೆಬಸ್ ನಲ್ಲಿನ ಅಂಶಗಳು ಮತ್ತೊಂದು ಪ್ರಮಾದಕ್ಕೆ ಕಾರಣವಾಗಿದೆ. ಶಾಲಾ ಕಾಲೇಜುಗಳ ಪಠ್ಯದಲ್ಲಿ ಟಿಪ್ಪು ಸುಲ್ತಾನ್, ವೈದ್ಯಕೀಯ ಸಮಾಜಶಾಸ್ತ್ರ ವಿವಾದ ತಣ್ಣಗಾಗುವ ಹೊತ್ತಲ್ಲೇ ಮತ್ತೊಂದು ಯಡವಟ್ಟು ಆಗಿದೆ. ಈ ಮೂಲಕ ಕರ್ನಾಟಕದ ಇತಿಹಾಸವನ್ನ ಮರೆಮಾಚುವ ಹುನ್ನಾರ ನಡೆದಿದೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ.