ಕನ್ನಡದ ಕಿರುತೆರೆ ನಟ-ನಟಿಯರು ಪರಭಾಷೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನ ಕಂಡುಕೊಳ್ಳುತ್ತಿದ್ದು, ಕನ್ನಡದ ಜೊತೆ ಜೊತೆಗೆ ಬೇರೆ ಭಾಷೆಗಳಲ್ಲಿಯೂ ಕೂಡ ಮಿಂಚುತ್ತಿದ್ದಾರೆ. ಸದ್ಯ ಈ ಸಾಲಿಗೆ ಕಿರುತೆರೆಯ ಮತ್ತೊರ್ವ ನಟಿ ಸೇರ್ಪಡೆಯಾಗಿದ್ದು, ನಟ ಚಂದನ್ಕುಮಾರ್ ಅವರಿಗೆ ಜೋಡಿಯಾಗುತ್ತಿದ್ದಾರೆ.
ಹೌದು, ನಮ್ಮನೆ ಯುವರಾಣಿ ಮೂಲಕ ಮನೆ ಮಾತಾಗಿರುವ ನಟಿ ಅಂಕಿತಾ ಅಮರ್ ಈಗ ತೆಲುಗು ಪ್ರಾಜೆಕ್ಟ್ ಮಾಡಲು ಸಜ್ಜಾಗಿದ್ದಾರೆ. ತೆಲುಗಿನ ಸ್ಟಾರ್ ಮಾನಲ್ಲಿ ಶುರುವಾಗುತ್ತಿರುವ ಹೊಸ ಸೀರಿಯಲ್ ಶ್ರೀಮತಿ ಶ್ರೀನಿವಾಸ್ ಮೂಲಕ ಇದೇ ಮೊದಲ ಬಾರಿಗೆ ತೆಲುಗು ಪ್ರೇಕ್ಷಕರನ್ನ ರಂಜಿಸಲು ಸಿದ್ದರಾಗುತ್ತಿದ್ದಾರೆ.
ಇನ್ನೊಂದು ವಿಶೇಷ ಅಂದ್ರೇ ಈಗಾಗಲೇ ಸಾಕಷ್ಟು ತೆಲುಗು ಪ್ರಾಜೆಕ್ಟ್ಗಳನ್ನ ಮಾಡಿ ಸೈ ಎನಿಸಿಕೊಂಡಿರುವ ನಟ ಚಂದನ್ಕುಮಾರ ಅವರು ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಸೀರಿಯಲ್ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಶ್ರೀಮತಿ ಶ್ರೀನಿವಾಸ್ ಸೀರಿಯಲ್ನಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
ಕನ್ನಡ ಜನಪ್ರೀಯ ನಟ ಚಂದನ್ ಹಾಗೂ ನಟಿ ಅಂಕಿತಾ ತೆಲುಗಿನ ಶ್ರೀಮತಿ ಶ್ರೀನಿವಾಸ್ ಸೀರಿಯಲ್ನಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಈ ಬಗ್ಗೆ ಸ್ವತಃ ಚಂದನ್ ಅವರೇ ನ್ಯೂಸ್ ಫರ್ಸ್ಟ್ ಜೊತೆ ಮಾತ್ನಾಡಿ ಮಾಹಿತಿ ಹಂಚಿಕೊಂಡಿದ್ದು, ಸುಶಾಂತ್ ಸಿಂಗ್ ರಾಜಾಪೂತ್ ಹಾಗೂ ಅಂಕಿತಾ ಲೋಕಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸೂಪರ್ ಡುಪರ್ ಹಿಟ್ ಹಿಂದಿ ಸೀರಿಯಲ್ ಪವಿತ್ರ ರಿಶ್ತಾದ ರಿಮೇಕ್ ಶ್ರೀಮತಿ ಶ್ರೀನಿವಾಸ್ ಆಗಿದ್ದು, ಏಕ್ತಾ ಕಪೂರ್ ನಿರ್ಮಾಣದ ಈ ಸೀರಿಯಲ್ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಸೊಗಸಾದ ಕತೆ ಹೊಂದಿರುವ ಈ ಸೀರಿಯಲ್ನ್ನ ಮರಳಿ ಮನಸ್ಸಾಗಿದೆ ಸೀರಿಯಲ್ ನಿರ್ಮಾಪಕರೇ ತೆಲುಗಿಗೆ ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಚಂದನ್ ಹಾಗೂ ಅಂಕಿತಾ ಸದ್ಯ ಕನ್ನಡ ಸ್ಮಾಲ್ ಸ್ಕ್ರೀನ್ನಲ್ಲಿ ಜನಪ್ರಿಯ ಕಲಾವಿದರು. ಅಂಕಿತಾ ಬಹುಮುಖ ಪ್ರತಿಭೆಯಾಗಿದ್ದು, ನೃತ್ಯ, ಹಾಡು, ನಿರೂಪಣೆ ಎಲ್ಲದರಲ್ಲಿಯೂ ಟಾಪ್ನಲ್ಲಿದ್ದಾರೆ. ಇನ್ನು ಚಂದನ್ ಕೂಡ ಈಗಾಗಲೇ ತೆಲುಗು ನಾಡಿನಲ್ಲಿ ಮನೆಮಾತಾದವರು. ಈ ಇಬ್ಬರ ಜೋಡಿ ಹೇಗಿರಲಿದೆ? ಎಂಬ ಕುತೂಹಲ ಮೂಡಿಸಿದ್ದು, ಮುಂದಿನ ತಿಂಗಳ ಹೊತ್ತಿಗೆ ತೆಲುಗು ಪ್ರೇಕ್ಷಕರ ಮನೆ ತಲುಪಲಿದ್ದಾರೆ ನಮ್ಮ ಕನ್ನಡದ ಪ್ರತಿಭೆಗಳು.
The post ತೆಲುಗಿಗೆ ಎಂಟ್ರಿ ಕೊಟ್ಟ ‘ನಮ್ಮನೆ ಯುವರಾಣಿ’- ಯಾರಿಗೆ ಜೋಡಿಯಾಗ್ತಿದ್ದಾರೆ ಮೀರಾ? appeared first on News First Kannada.