ತ್ರಿಪುರಾದಲ್ಲಿ ನಡೆದಿದೆ ಎನ್ನಲಾದ ಘಟನೆ ವಿರೋಧಿಸಿ ಪ್ರತಿಭಟನೆ; ಸಿಎಂ ತವರೂರಲ್ಲಿ ಕಲ್ಲು ತೂರಾಟ


ಹಾವೇರಿ: ತ್ರಿಪುರಾದಲ್ಲಿ ನಡೆಯುತ್ತಿರುವ ಕೋಮುಗಲಭೆ ವಿರೋಧಿಸಿ ಪ್ರತಿಭಟನೆ ವೇಳೆ ಅನ್ಯ ಕೋಮಿನ ಯುವಕರು ಆರ್​ಎಸ್​ಎಸ್​ ಪ್ರಮುಖರ ಅಂಗಡಿಯ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರವಾದ ಜಿಲ್ಲೆಯ ಸವಣೂರಿನಲ್ಲಿ ಈ ಘಟನೆ ನಡೆದಿದ್ದು ಪ್ರತಿಭಟನೆ ವೇಳೆ ಯುವಕರು ಆರ್​ಎಸ್​ಎಸ್​ ಪ್ರಮುಖರ ಅಂಗಡಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಹಿಂದೂಸ್ತಾನ ಮೆ ರಹೆನಾ ಹೋತೋ, ಖಾಜಾ ಖಾಜಾ ಕಹನಾ ಹೋಗಾ. ಆರ್​ಎಸ್​ಎಸ್​ ಮುರ್ದಾಬಾದ್​ ಎಂಬ ಆಕ್ಷೇಪಾರ್ಹ ಘೋಷಣೆಗಳನ್ನು ಯುವಕರು ಕೂಗುತ್ತಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆಂದು ನಗರದ ಹಲವು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಮತ್ತೊಂದು ಕೋಮಿನ ಯುವಕರ ವರ್ತನೆ ಕಂಡು ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಪೋಲಿಸ್ ಠಾಣೆಯ ಮುಂದೆ ಧರಣಿ ಕುಳಿತಿವೆ. ಈ ವೇಳೆ ದೇಶ ದ್ರೋಹಿ ಹೇಳಿಕೆಗಳನ್ನ ಕೂಗಿದವರನ್ನು ಮತ್ತು ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​ಗೆ ತೆರೆ ಬೆನ್ನಲ್ಲೇ ಪಾಕ್​ಗೆ ಅನ್ಯಾಯ ಆಗಿದೆ ಎಂದು ಕ್ಯಾತೆ ತೆಗೆದ ರಾವಲ್ಪಿಂಡಿ ಎಕ್ಸ್​ಪ್ರೆಸ್​

News First Live Kannada


Leave a Reply

Your email address will not be published. Required fields are marked *