ದತ್ತಪೀಠಕ್ಕೆ ತೆರಳುತ್ತಿದ್ದ ಮಾಲಾಧಾರಿಗಳ ಬಸ್​ ಮೇಲೆ ಕಲ್ಲು ತೂರಾಟ..ರಾತ್ರೋರಾತ್ರಿ ಪ್ರತಿಭಟನೆ


ಕೋಲಾರ: ದತ್ತಪೀಠಕ್ಕೆ ತೆರಳುತ್ತಿದ್ದ ಮಿನಿ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಗರದ ಎಂಬಿ ರಸ್ತೆಯ ವಿಶಾಲ್ ಮಾರ್ಟ್ ಎದುರು ನಡೆದಿದೆ.

ಕೋಲಾರದಿಂದ ದತ್ತಪೀಠ ದರ್ಶನಕ್ಕೆ 24 ಮಾಲಾದಾರಿಗಳು ಮಿನಿ ಬಸ್ ನಲ್ಲಿ ಹೊರಟಿದ್ದ ವೇಳೆ ಕಲ್ಲು ತೂರಾಟ ನಡೆಸಲಾಗಿದೆ. ಪರಿಣಾಮ ಬಸ್​ ಹಿಂಭಾಗದ ಗಾಜು ಪುಡಿ ಪುಡಿಯಾಗಿದ್ದು ಮುಂಭಾಗ ಕುಳಿತಿದ್ದ ಇಬ್ಬರಿಗೆ ಗೆ ತೀವ್ರ ಗಾಯಗಾಳಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಕೃತ್ಯ ಖಂಡಿಸಿ ತಡರಾತ್ರಿ ಕೋಲಾರ ನಗರ ಠಾಣೆ ಎದುರು ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಆರಂಭವಾಗಿದ್ದು ಶ್ರೀರಾಮ ಸೇನೆ, ಭಜರಂಗದಳ ಹಾಗೂ ದತ್ತ ಮಾಲಾಧಾರಿಗಳು ಭಾಗಿಯಾಗಿದ್ದಾರೆ. ಕೃತ್ಯ ಎಸಗಿದವರನ್ನು ಕೂಡಲೇ ಪತ್ತೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಗಿರಿ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಬೇರೊಂದು ಬಸ್​ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಆದಷ್ಟು ಬೇಗ ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚನೆ ಮಾಡೋದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಗದಗದಿಂದ ಬಂದು ಅಪ್ಪು ಸಮಾಧಿ ಮುಂದೆ ಹುಟ್ಟಹಬ್ಬ ಆಚರಿಸಿಕೊಂಡ ಪುಟಾಣಿ

News First Live Kannada


Leave a Reply

Your email address will not be published. Required fields are marked *