ದಿಗ್ಗಜರ ಸಮಾಗಮಕ್ಕೆ ನಡುಗಿದ ಕ್ರಿಕೆಟ್​ ಲೋಕ.. ದಾದಾ, ವಾಲ್, ಲಕ್ಷ್ಮಣ್ ಅಂದ್ರೆ ಯಾಕೆ ಭಯ..?


ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್, VVS​ ಲಕ್ಷ್ಮಣ್​.. 2000ದ ಕಾಲಘಟ್ಟದಲ್ಲಿ ಟೀಮ್​ ಇಂಡಿಯಾದ ಸೆನ್ಸೇಷನ್ಸ್​. ಭಾರತಕ್ಕೆ ಗೆಲುವಿನ ರುಚಿ ಹತ್ತಿಸಿದ ನಾಯಕ ದಾದಾ, ಫಿಕ್ಸಿಂಗ್ ಭೂತದಿಂದ ತಂಡವನ್ನ ಹೊರಕ್ಕೆ ತಂದ ಗ್ರೇಟ್​ ಲೀಡರ್. ಇತ್ತ, ಎಂಥ ಸಂಕಷ್ಟಕ್ಕೆ ಸಿಲುಕಿದ್ರೂ, ತಂಡವನ್ನ ಸೋಲಿನಿಂದ ಪಾರು ಮಾಡುತ್ತಿದ್ದದ್ದು ಆಪತ್ಭಾಂದವ ಜೋಡಿ ದ್ರಾವಿಡ್​​-ಲಕ್ಷ್ಮಣ್. ಈ ಮೂವರು ಮಹನೀಯರು ಟೀಮ್ ಇಂಡಿಯಾಕ್ಕೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ. ಇದೀಗ ಮತ್ತೆ ಈ ದಿಗ್ಗಜರು ಒಟ್ಟಾಗಿ ಟೀಮ್​ ಇಂಡಿಯಾಗೆ ಸೇವೆ ಸಲ್ಲಿಸಲಿದ್ದಾರೆ.

ವಿಶ್ವಶ್ರೇಷ್ಠ ಆಟಗಾರರನ್ನ ಬೆಳೆಸಿದ ಮಹಾರಾಜ, ಸೌರವ್ ಗಂಗೂಲಿ ಪ್ರಸ್ತುತ ವಿಶ್ವ ಶ್ರೀಮಂತ ಕ್ರಿಕೆಟ್​ ಸಂಸ್ಥೆ ಬಿಸಿಸಿಐ ಅಧ್ಯಕ್ಷ. ಅತ್ತ ಭಾರತ ತಂಡದ ಹೆಡ್​ಕೋಚ್​ ದಿ ವಾಲ್​​. ಇದೀಗ NCA ಮುಖ್ಯಸ್ಥರಾಗಿ ಟೆಸ್ಟ್​ ಸ್ಪೆಷಲಿಸ್ಟ್​ ಬ್ಯಾಟ್ಸ್​ಮನ್​​​​ VVS​ ಲಕ್ಷ್ಮಣ್​​ ಕೂಡ ಎಂಟ್ರಿ ಕೊಟ್ಟಿದ್ದು, ದಿಗ್ಗಜರ ಸಮಾಗಮ ಭಾರತೀಯ ಕ್ರಿಕೆಟ್​ನಲ್ಲಿ ಹೊಸ ನಿರೀಕ್ಷೆಯನ್ನೇ ಹುಟ್ಟುಹಾಕಿದೆ. ಆದರೆ ಈ ತ್ರಿಮೂರ್ತಿಗಳು ಸೇವೆ ಸಲ್ಲಿಸೋದು ಮೈದಾನದಲ್ಲಿ ಅಲ್ಲ, ಬದಲಾಗಿ ಆಫ್​​ ದ ಫೀಲ್ಡ್​​ನಲ್ಲಿ.

ಇದನ್ನೂ ಓದಿ: 2024ರ ಐಸಿಸಿ ‘ಟಿ20 ವಿಶ್ವಕಪ್’​ ಟೂರ್ನಿ ಆತಿಥ್ಯ ವಹಿಸುವ ದೇಶ ಯಾವುದು ಗೊತ್ತಾ..?

ಪ್ರತಿ ಕೆಲಸಕ್ಕೆ ವೃತ್ತಿಪರ ಚಿಂತನೆ, ತಾರ್ಕಿಕ ಆಲೋಚನೆಗಳ ವಾಸ್ತವಿಕ ಗುರಿ, ಪೂರಕ ಹೊಂದಾಣಿಕೆ, ಸುಧಾರಣೆ ಪ್ರಯತ್ನಶೀಲತೆ, ನಿರಂತರ ಪ್ರಕ್ರಿಯೆ ಮೂಲಕ ಗುರಿ ಮುಟ್ಟುವುದು ಈ ತ್ರಿಮೂರ್ತಿಗಳ ಸ್ಟೈಲ್​. ರಾಹುಲ್​, ಗಂಗೂಲಿ ಈಗಾಗಲೇ ನಿರೂಪಿಸಿದರೆ, ಲಕ್ಷ್ಮಣ್​ ಗಮ್ಯದತ್ತ ಈಗ ಹೆಜ್ಜೆ ಹಾಕಲಿದ್ದಾರೆ. ಪ್ರತಿಭೆಗಳನ್ನ ಸೃಷ್ಟಿಸುವ ಕೇಂದ್ರ ನ್ಯಾಷನಲ್​​ ಕ್ರಿಕೆಟ್​​ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ಲಕ್ಷ್ಮಣ್ ಹೆಸರು ಶೀಘ್ರವೇ ಅಧಿಕೃತಗೊಳ್ಳಲಿದ್ದು, ಸವಾಲುಗಳ ಬೆಟ್ಟ ಎದುರಿಸೋಕೆ ಸನ್ನದ್ಧರಾಗಿದ್ದಾರೆ.

ಮುಂದಿನ 2 ವರ್ಷಗಳಲ್ಲಿ ಭಾರತಕ್ಕಿದೆ ಬೆಟ್ಟದಷ್ಟು ಸವಾಲು
ಮುಂದಿನ 2 ವರ್ಷಗಳಲ್ಲಿ ಐಸಿಸಿಯ T20 ವಿಶ್ವಕಪ್​, ಏಕದಿನ ವಿಶ್ವಕಪ್​ ಹಾಗೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗಳಿವೆ. ಜೊತೆಗೆ ಏಷ್ಯಾಕಪ್, ಪ್ರತಿಷ್ಠಿತ ಸರಣಿಗಳಿವೆ. ಹಾಗಾಗಿ ಟೀಮ್​ ಇಂಡಿಯಾ ದೊಡ್ಡಮಟ್ಟದ ಕಸರತ್ತನ್ನೇ ನಡೆಸಬೇಕು. ಅದಕ್ಕೆ ಮೂವರು ಸಾಕಷ್ಟು ಯೋಜನೆಗಳನ್ನ ರೂಪಿಸುವಲ್ಲಿ ನಿರತರಾಗಿದ್ದಾರೆ. ಮುಂದಿನ ಟೂರ್ನಿಗಳಿಗಾಗಿ ಡಿಫ್ರೆಂಟ್​ ಗೇಮ್​ ಪ್ಲಾನ್​, ಬ್ಲೂ ಪ್ರಿಂಟ್​ ಕೂಡ ಸಿದ್ಧಪಡಿಸ್ತಿದ್ದಾರೆ.
ಸದ್ಯ ತ್ರಿಮೂರ್ತಿಗಳು ಕ್ರಿಕೆಟ್​ ಲೋಕದಲ್ಲಿ ಮತ್ತೆ ಒಂದಾಗಿ ಸೇವೆ ಸಲ್ಲಿಸೋಕೆ ಸಿದ್ಧರಾಗಿರೋದು ವಿಶ್ವ ಕ್ರಿಕೆಟ್​ ಸಂಸ್ಥೆಗಳಿಗೆ ನಡುಕ ಶುರುವಾಗಿದೆ. ಒಟ್ಟಿನಲ್ಲಿ ದ್ರಾವಿಡ್​​-ಲಕ್ಷ್ಮಣ್​ ಜೊತೆಯಾಟ ಮತ್ತು ಅದ್ಭುತ ನಾಯಕತ್ವದಿಂದ ಗಂಗೂಲಿ ಟೀಮ್​ ಇಂಡಿಯಾವನ್ನ ಅಂದು ಗೆಲ್ಲಿಸಿದಂತೆ, ಮುಂದೆಯೂ ಭಾರತವನ್ನ ಗೆಲ್ಲಿಸಿಕೊಟ್ಟು ಮತ್ತೊಂದು ಮಜಲಿಗೆ ಕೊಂಡೊಯ್ಯಲಿ ಅನ್ನೋದೇ ನಮ್ಮೆಲ್ಲರ ಆಶಯ.

ಇದನ್ನೂ ಓದಿ: ನ್ಯೂಜಿಲೆಂಡ್​​ ವಿರುದ್ಧ 8 ವಿಕೆಟ್ ಭರ್ಜರಿ​​ ಜಯ; ಆಸ್ಟ್ರೇಲಿಯಾ ಮಡಿಲಿಗೆ ಚೊಚ್ಚಲ ಟಿ20 ವಿಶ್ವಕಪ್​​​ ಟ್ರೋಫಿ

ಇದನ್ನೂ ಓದಿ: ರನ್ನರ್​ಅಪ್​​ಗೆ ತೃಪ್ತಿಪಟ್ಟ ವಿಲಿಯಮ್ಸನ್.. ‘ಚಾಂಪಿಯನ್ ನಗು’ ಬೀರಿದ ಆಸ್ಟ್ರೇಲಿಯಾದ ‘ಬೊಂಬಾಟ ಆಟ’ ಹೇಗಿತ್ತು..?

News First Live Kannada


Leave a Reply

Your email address will not be published. Required fields are marked *