ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ದೆಹಲಿಯ ತ್ಯಾಗರಾಜ್ ಮೈದಾನದಲ್ಲಿ ಆಯೋಜಿಸಿದ್ದ ದೀಪಾವಳಿ ಪೂಜಾ ಕಾರ್ಯಕ್ರಮದಲ್ಲಿ ಸಿಎಂ ಕೇಜ್ರಿವಾಲ್ ಹಾಗೂ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಭಾಗಿಯಾಗಿದ್ದಾರೆ. ಜೊತೆಗೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಅವರ ಪತ್ನಿ ಸೀಮಾ ಸಿಸೋಡಿಯಾ ಸಹ ಪೂಜೆಯಲ್ಲಿ ಭಾಗಿಯಾಗಿ ಕೆಲ ಕಾಲ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದಾರೆ.
This is how Delhi celebrated this year’s #Diwali#DilliKiDiwali 🪔 pic.twitter.com/ZPzI9qNuYl
— AAP (@AamAadmiParty) November 4, 2021
ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಭವ್ಯ ರಾಮಮಂದಿರದ ಮಾದರಿಯನ್ನು 30 ಅಡಿ ಎತ್ತರ ಮತ್ತು 80 ಅಡಿ ಅಗಲದ ನಿರ್ಮಿಸಿಲಾಗಿತ್ತು. ದಿಲ್ಲಿ ಕಿ ದೀಪಾವಳಿ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೆಹಲಿ ಸರ್ಕಾರದ ಬಹುತೇಕ ಸಚಿವರು, ಎಎಪಿ ಪಕ್ಷದ ನಾಯಕರು ಭಾಗಿಯಾಗಿದ್ದರು.
Lord Shri Ram gets a glorious welcome at @ArvindKejriwal Govt’s #DilliKiDiwali celebrations 🪔 pic.twitter.com/aso59fU6zG
— AAP (@AamAadmiParty) November 4, 2021
#DilliKiDiwali 🪔 in Pictures 📸 pic.twitter.com/J2DowSmtik
— AAP (@AamAadmiParty) November 4, 2021