ಮಗನ ಕಾರಣದಿಂದಲೇ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ಮಾಡಲಾಯಿತು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು. ಈ ಸಂಬಂಧ ಮಾತಾಡಿದ ಗಂಗೂಲಿ, ಕೋಚ್ ಆಯ್ಕೆಯಲ್ಲಿ ದ್ರಾವಿಡ್ ಅವರ ಮಗ ಪ್ರಭಾವ ಬೀರಿದ್ದಾನೆ ಎಂದರು.
‘ದ್ರಾವಿಡ್ ಅವರ ಮಗನಿಂದ ನನಗೆ ಕರೆ ಬಂದಿತ್ತು. ದ್ರಾವಿಡ್ ಮನೆಯಲ್ಲಿ ತುಂಬಾ ಸ್ಟ್ರಿಕ್ಟ್ ಆಗಿದ್ದ. ಹಾಗಾಗಿ ನನಗೆ ಕರೆ ಮಾಡಿ ನನ್ನಪ್ಪನ್ನು ಕೋಚ್ ಮಾಡಿಬಿಡಿ ಎಂದು ಬೆದರಿಕೆ ಹಾಕಿದ. ಹಾಗಾಗಿ ನಾನು ದ್ರಾವಿಡ್ಗೆ ಈಗ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಸಮಯ, ಕೋಚ್ ಹುದ್ದೆ ವಹಿಸಿಕೊ ಎಂದೆ ಎನ್ನುವ ಮೂಲಕ ತಮಾಷೆ ಮಾಡಿದರು.
‘ನಾವು ಒಟ್ಟಿಗೆ ಬೆಳೆದವರು, ಒಂದೇ ಸಮಯದಲ್ಲಿ ಕ್ರಿಕೆಟ್ ವೃತ್ತಿ ಪ್ರಾರಂಭಿಸಿದವರು. ಹೆಚ್ಚಿನ ಸಮಯವನ್ನು ಒಟ್ಟಿ ಕಳೆದಿದ್ದೇವೆ. ಹಾಗಾಗಿ ನಮ್ಮ ನಡುವೆ ಎಲ್ಲಾವೂ ಓಪನ್ ಎಂದರು ಗಂಗೂಲಿ.
ಈ ಹಿಂದೆ ಬಿಸಿಸಿಐ ರಾಹುಲ್ ದ್ರಾವಿಡ್ ಅವರನ್ನು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ನವೆಂಬರ್ 17ರ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಪ್ರಾರಂಭಕ್ಕೂ ಮೊದಲು ದ್ರಾವಿಡ್ ತಮ್ಮ ಸಹಾಯಕ ಸಿಬ್ಬಂದಿಯೊಂದಿಗೆ ತಂಡವನ್ನು ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ಗೆ ತೆರೆ ಬೆನ್ನಲ್ಲೇ ಪಾಕ್ಗೆ ಅನ್ಯಾಯ ಆಗಿದೆ ಎಂದು ಕ್ಯಾತೆ ತೆಗೆದ ರಾವಲ್ಪಿಂಡಿ ಎಕ್ಸ್ಪ್ರೆಸ್