ವಿಶ್ವಕಪ್ ಬಳಿಕ ಕೊಹ್ಲಿ, ವೈಟ್ಬಾಲ್ ಕ್ರಿಕಟ್ ನಾಯಕತ್ವಕ್ಕೆ ಗುಡ್ಬೈ ಹೇಳಲಿದ್ದಾರೆ. ಕೋಚ್ ಶಾಸ್ತ್ರಿ, ಭರತ್ ಅರುಣ್, R ಶ್ರೀಧರ್, ವಿಕ್ರಮ್ ರಾಥೋರ್ ಅಧಿಕಾರವಧಿ ಕೂಡ ಕೊನೆಗೊಳ್ಳಲಿದೆ. ಈ ಖಾಲಿ ಸ್ಥಾನಗಳಿಗೆ ಯಾರನ್ನೆಲ್ಲಾ ಆಯ್ಕೆ ಮಾಡಬೇಕೆಂಬ ಗೊಂದಲ, ಇದೀಗ BCCIಗೆ ಹುಟ್ಟಿದೆ. ಅದಕ್ಕೆ ಉತ್ತರ ಕೂಡ ಸಿಕ್ಕಿದೆ.
ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಅಧಿಕೃತವಾಗಿ ನೇಮಕವಾಗಿದ್ದಾರೆ. ಇದು ಟೀಮ್ ಇಂಡಿಯಾಗೆ ಹೊಸ ಯುಗವನ್ನ ಸೂಚಿಸ್ತಿದೆ. ಪ್ರತಿ ಹೆಜ್ಜೆಯಲ್ಲೂ ಹೊಸತನ್ನೇ ಕೆದಕಿ ಸಂಶೋಧಿಸುವ ದ್ರಾವಿಡ್, ಕೋಚ್ ಆಗಿ ತಂಡಕ್ಕೆ ಏನೆಲ್ಲಾ ಅಗತ್ಯಯಿದೆ ಅನ್ನೋದರ ಬ್ಲೂ ಪ್ರಿಂಟ್ ಸಿದ್ಧಪಡಿಸಿದ್ದಾರೆ. ಅದರಂತೆ ಕಣಕ್ಕಿಳಿಸಲು ಪ್ಲಾನ್ ರೂಪಿಸಿದ್ದಲ್ಲದೆ, ತನ್ನ ತಂಡಕ್ಕೆ ಕ್ಯಾಪ್ಟನ್, ಸಹಾಯಕ ಕೋಚ್ಗಳು ಯಾರೆಲ್ಲಾ ಬೇಕು ಅನ್ನೋದನ್ನ ಆಯ್ಕೆ ಮಾಡಿದ್ದಾರೆ.
ವೈಟ್ಬಾಲ್ ಕ್ರಿಕೆಟ್ಗೆ ರೋಹಿತ್ ಶರ್ಮಾ ಕ್ಯಾಪ್ಟನ್..!
ವೈಟ್ಬಾಲ್ ಕ್ರಿಕೆಟ್ ನಾಯಕತ್ವದಿಂದ ವಿರಾಟ್ ಕೆಳಗಿಳಿಯೋದು ಕನ್ಫರ್ಮ್. ಆದ್ರೆ ಕೊಹ್ಲಿ ಕೆಳಗಿಳಿಯುವ ಮುನ್ನವೇ ರೋಹಿತ್ ಶರ್ಮಾಗೆ ನಾಯಕತ್ವ ವಹಿಸುವಂತೆ ದ್ರಾವಿಡ್ ಸೂಚಿಸಿದ್ದಾರೆ. ಏಕೆಂದ್ರೆ IPLನಲ್ಲಿ ಮತ್ತು ಭಾರತ ತಂಡವನ್ನ ಉತ್ತಮವಾಗಿ ಮುನ್ನಡೆಸಿದ ಅಪಾರ ಅನುಭವ ಹೊಂದಿದ್ದಾರೆ. ಜೊತೆಗೆ ಗೇಮ್ಪ್ಲಾನ್,ಟ್ಯಾಕ್ಟಿಸ್, ಸ್ಟ್ರಾಟಜಿ, ಕ್ಯಾಪ್ಟನ್ಸಿ ಎಲ್ಲರಿಗಿಂತ ವಿಭಿನ್ನವಾಗಿದೆ. ಇದು ಒಂದಲ್ಲ, ಹಲವು ಬಾರಿ ಪ್ರೂವ್ ಆಗಿದೆ. ಅದಕ್ಕಾಗಿಯೇ ರೋಹಿತ್ ಆಯ್ಕೆಗೆ ದ್ರಾವಿಡ್ ಸೂಚಿಸಿದ್ದಾರೆ.
ಕನ್ನಡಿಗ ಕೆ.ಎಲ್.ರಾಹುಲ್ಗೆ ಉಪನಾಯಕನ ಪಟ್ಟ..!
ರೋಹಿತ್ ನಾಯಕನಾದ್ರೆ ರಾಹುಲ್ ಉಪನಾಯಕ ಅನ್ನೋ ಸುದ್ದಿ ಸಹ ಹರಿದಾಡ್ತಿದೆ. ರಾಹುಲ್ಗೆ ಉಪ ನಾಯಕನ ಪಟ್ಟ ನೀಡಬೇಕೆಂದು ಪಟ್ಟು ಹಿಡಿದಿರೋದು ದ್ರಾವಿಡ್. IPLನಲ್ಲಿ ಪಂಜಾಬ್ ತಂಡವನ್ನ ಮುನ್ನಡೆಸಿರುವ ರಾಹುಲ್ಗೆ, ರಾಷ್ಟ್ರೀಯ ತಂಡದ ನಾಯಕತ್ವ ಪಾತ್ರದ ಪರಿಚಯ ಮಾಡಿಕೊಡುವುದು ದ್ರಾವಿಡ್ ಉದ್ದೇಶ. ಏಕೆಂದ್ರೆ ಭಾರತಕ್ಕೆ ಭವಿಷ್ಯದ ನಾಯಕನನ್ನ ಈಗಿನಿಂದಲೇ ಸಿದ್ಧಪಡಿಸೋದು ದ್ರಾವಿಡ್ ಮಾಸ್ಟರ್ ಪ್ಲಾನ್.
ಪರಾಸ್ ಮಾಂಬ್ರೆಗೆ ಬೌಲಿಂಗ್ ಕೋಚ್ ಹುದ್ದೆ..!
ಭಾರತದ ‘ಎ’ ಮತ್ತು ಅಂಡರ್-19 ತಂಡದ ಬೌಲಿಂಗ್ ಕೋಚ್ ಆಗಿದ್ದ ಅನುಭವ, ಪರಾಸ್ ಮಾಂಬ್ರೆಗೆ ಇದೆ. ಯುವ ಕ್ರಿಕೆಟಿಗರಿಗೆ ತರಬೇತಿ ನೀಡಿ ಯಶಸ್ಸು ಕಂಡಿರುವ ಮಾಂಬ್ರೆ, NCAನಲ್ಲಿ ದ್ರಾವಿಡ್ ಜೊತೆಗೆ ಕೆಲಸ ಮಾಡಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲೂ ಮಾಂಬ್ರೆ, ದ್ರಾವಿಡ್ ಜೊತೆ ಕೆಲಸ ಮಾಡಿದ್ರು. ಆಪ್ತನ ಜೊತೆಗೆ ಒಟ್ಟಾಗಿ ಕೆಲಸ ಮಾಡಿ ಎಲ್ಲಾ ಕಡೆ ಮ್ಯಾಜಿಕ್ ನಡೆದಿದೆ. ಭಾರತ ತಂಡದಲ್ಲೂ ಇದೇ ಮ್ಯಾಜಿಕ್ ಮುಂದುವರೆಸೋದು ದ್ರಾವಿಡ್ ಯೋಜನೆಯಾಗಿದೆ.
ಫೀಲ್ಡಿಂಗ್ ಕೋಚ್ ಸ್ಥಾನಕ್ಕೆ ಅಭಯ್ ಶರ್ಮಾ ನೇಮಕ ಸಾಧ್ಯತೆ?
ಅಭಯ್ ಶರ್ಮಾ ಕೂಡ ಟೀಮ್ ಅಂಡರ್-19, ಭಾರತ-ಎ ತಂಡದಲ್ಲಿ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ದ್ರಾವಿಡ್ ಆಪ್ತರಾಗಿರುವ ಅಭಯ್, NCAನಲ್ಲೂ ಕೋಚ್ ಆಗಿ ದ್ರಾವಿಡ್ ಜೊತೆ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಅಭಯ್ ಶರ್ಮಾ ಆಯ್ಕೆಗೆ, ದ್ರಾವಿಡ್ ಒಲವು ತೋರಿದ್ದಾರೆ.
ಬ್ಯಾಟಿಂಗ್ ಕೋಚ್ಗೆ ವಿಕ್ರಮ್ ರಾಥೋರ್ ಮರು ನೇಮಕ.?
ಹೀಗಾಗಿ ಮರು ಅರ್ಜಿ ಸಲ್ಲಿಸಿದ್ದು, ರಾಥೋರ್ ಆಯ್ಕೆ ಬಹುತೇಕ ಖಚಿತ ಎನ್ನಲಾಗ್ತಿದೆ. ಒಟ್ನಲ್ಲಿ ದ್ರಾವಿಡ್ ಅಂದುಕೊಂಡಂತೆ ಈ ಎಲ್ಲಾ ಪ್ಲಾನ್ ವರ್ಕೌಟ್ ಆದ್ರೆ, ಟೀಮ್ ಇಂಡಿಯಾ ಮತ್ತಷ್ಟು ಬಲಿಷ್ಠ ಆಗೋದ್ರಲ್ಲಿ ಅನುಮಾನವೇ ಇಲ್ಲ.