ಮಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ವಾರ ಕಳೆದಿದೆ. ಪುನೀತ್ ಅವರ ನೆನಪು, ಅವರ ನಗು ಇನ್ನೂ ಕೋಟ್ಯಾಂತರ ಜನರನ್ನು ಕಾಡುತ್ತಿದೆ.
ಅಪ್ಪು ಅಗಲಿ ವಾರವಾದರೂ ಅಭಿಮಾನಿಗಳಿಗೆ ಅಪ್ಪು ಇನ್ನಿಲ್ಲ ಎಂಬ ಕಹಿ ಸತ್ಯ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಅಭಿಮಾನಿ ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆಯ ಕಲಾವಿದ,ಗಣೇಶ್ ಆಚಾರ್ಯ ಗುಂಪಲಾಜೆ ವಿಶೇಷವಾಗಿ ಅಪ್ಪುವಿಗೆ ನಮನ ಸಲ್ಲಿಸಿದ್ದಾರೆ.
ಸುಮಾರು ಏಳು ಗಂಟೆಗಳ ಕಾಲ ಶ್ರಮ ವಹಿಸಿ ರಂಗೋಲಿಯಲ್ಲಿ ಅಪ್ಪುವಿನ ನಗುಮೊಗದ ಚಿತ್ರ ರಚಿಸಿದ್ದಾರೆ. ಈ ಮೂಲಕ ಅಪ್ಪುವಿಗೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.