ಚೆನ್ನೈ: ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ನವೆಂಬರ್ 2 ರಂದು ಬಿಡುಗಡೆಯಾಗಿರುವ ಸೂರ್ಯ ಅಭಿನಯದ ತಮಿಳು ಚಿತ್ರ ‘ಜೈ ಭೀಮ್’ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಹಿಂದುಳಿದ ಸಮುದಾಯದ ನೋವಿಗೆ ಸೂರ್ಯ ವಕೀಲನ ಪಾತ್ರದಲ್ಲಿ ಮಿಂಚಿ ನ್ಯಾಯಕ್ಕಾಗಿ ಹೋರಾಡುವ ಪರಿಗೆ ಸಿನಿ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಇನ್ನು ಚಿತ್ರದ ಕುರಿತು ಅಲ್ಲಲ್ಲಿ ಪರ ಹಾಗೂ ವಿರುದ್ಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಅನೇಕ ಮಂದಿ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ತಮಿಳುನಾಡು ಬಿಜೆಪಿ ಮುಖಂಡ ಹೆಚ್ ರಾಜಾ, ಟ್ವೀಟರ್ನಲ್ಲಿ ಸೂರ್ಯರನ್ನು ಟೀಕಿಸಿ ಸ್ವಾರ್ಥಿ ಅಂತ ಕರೆದಿದ್ದಾರೆ.
நம் குழந்தை 3 மொழி படிக்கக் கூடாது என்றவர் தன் படத்தை 5 மொழிகளில் வெளியிடுவாராம். சுயநலமிகளை புரிந்து கொள்வோம். pic.twitter.com/nHRXKw4sjj
— H Raja (@HRajaBJP) November 3, 2021
ಹೌದು ತಮಿಳುನಾಡು ಬಿಜೆಪಿ ಮುಖಂಡ ನಟ ಸೂರ್ಯ ಒಬ್ಬ ಸ್ವಾರ್ಥಿ ಎಂದು ಕರೆದಿದ್ದು ಸೂರ್ಯನ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಬಿಕೆಪಿ ಮುಖಂಡ ಮಾಡಿದ್ದ ಟ್ವೀಟ್ಗೆ ಸೂರ್ಯ ಲೈಕ್ ಮಾಡಿದ್ದು, ನಟನ ಪರವಾಗಿ ಅನೇಕ ಮಂದಿ ಬಿಜೆಪಿ ಮುಖಂಡರಿಗೆ ರೀಟ್ವೀಟ್ ಮಾಡುವ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.