ಬೆಂಗಳೂರು: ನಿನ್ನೆ ಸದನದಲ್ಲಿ ನಡೆದ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಟಾಪಟಿಗೆ ಸಂಬಂಧಿಸಿದಂತೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಡಿಕೆಸ್ ವಬಳಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ನಿನ್ನೆ ಉಭಯ ನಾಯಕರ ನಡುವೆ ಸಾಕಷ್ಟು ವಾಕ್ಸಮರ ನಡೆದಿತ್ತು. ಈ ವೇಳೆ ಇಬ್ಬರು ನಾಯಕರು ವೈಯಕ್ತಿಕ ವಿಚಾರದ ಕುರಿತ ಮಾತನಾಡಿ ಇಡೀ ಕಲಾಪದಲ್ಲಿ ಗದ್ದಲ ಸೃಷ್ಟಿಸಿದ್ದರು. ಇದೀಗ ಸ್ಪೀಕರ್ ಕಾಗೇರಿ ನಿನ್ನೆಯ ಘಟನೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಿ ಡಿಕೆಎಸ್ ಬಳಿ ಕ್ಷಮೆ ಕೋರಿದ್ದಾರೆ.