ಮಂಡ್ಯ: ಮೇಲುಕೋಟೆಯಲ್ಲಿ ತೆಲಗು ನಟ ನಾಗಚೈತನ್ಯ ನಟನೆಯ ಸಿನಿಮಾ ಚಿತ್ರಿಕರಣದ ವೇಳೆ ಕ್ರೇನ್ ಕಲ್ಯಾಣಿಯಲ್ಲಿ ಸಿಲುಕಿದ್ದು ಕಲ್ಯಾಣಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇತ್ತೀಚಿಗೆ ತಮಿಳು ಬಂಗಾರರಾಜು-2 ಸಿನಿಮಾದ ಸಿನಿಮಾ ಚಿತ್ರಿಕರಣದ ವೇಳೆ ಯಡವಟ್ಟೊಂದು ಸಂಭವಿಸಿದ ಬೆನ್ನಲ್ಲೇ ಇದೀಗ ತೆಲಗು ಸ್ಟಾರ್ ನಟ ನಾಗಚೈತನ್ಯ ಅಭಿನಯದ ಸಿನಿಮಾ ಚಿತ್ರಿಕರಣದ ವೇಳೆ ಕಲ್ಯಾಣಿಯಲ್ಲಿ ಕ್ರೇನ್ ಸಿಲುಕಿಕೊಂಡು ಅವಾಂತರ ಸೃಷ್ಟಿಸಿದೆ.
ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಈ ಘಟನೆ ನಡೆದಿದ್ದು ಅನುಮತಿ ಪಡೆಯದೇ ನಿಯಮಗಳ್ನು ಉಲ್ಲಂಘಿಸಿ ಕಲ್ಯಾಣಿಯಲ್ಲಿ ಕ್ರೇನ್ ಮೂಲಕ ಶೂಟಿಂಗ್ ನಡೆಸಿರುವ ಆರೋಪ ಕೇಳಿ ಬಂದಿದೆ. ಎರಡು ದಿನಗಳಿಂದ ಮಳೆಯಾಗಿದ್ದರಿಂದ ಮಣ್ಣು ತೇವವಿದ್ದು ಪರಿಣಾಮ ಕ್ರೇನ್ ಕಲ್ಯಾಣಿಯಲ್ಲಿ ಜಾರಿ ಸಿಕ್ಕಿ ಹಾಕಿಕೊಂಡಿದೆ. ಇನ್ನು ಕ್ರೇನ್ ಮೇಲೆಕ್ಕೆತ್ತುವಾಗ ಐತಿಹಾಸಿಕ ಕಲ್ಯಾಣಿಯ ಕಲ್ಲುಗಳಿಗೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇನ್ನು ಚಿತ್ರಿಕರಣ ತಂಡದಿಂದ ಚೆಲುವನಾರಾಯಣಸ್ವಾಮಿ ಅಭಿಷೇಕಕ್ಕೆ ಬಳಸುತ್ತಿದ್ದ ಕಲ್ಯಾಣಿ ನೀರು ಈಗಾಗಲೇ ಕಲುಷಿತಗೊಂಡಿದ್ದು ಸಾರ್ವಜನಿಕರನ್ನು ಕೆರಳಿಸಿದೆ. ಅಂತ್ರದಲ್ಲಿ ಇದೀಗ ಈ ಅವಘಡ ಸಂಭವಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತಿಚಿಗೆ ಪಾಳು ಬಿದ್ದಿದ್ದ ಕಲ್ಯಾಣಿಯನ್ನು ಇನ್ಫೋಸಿಸ್ ಸುಧಾಮೂರ್ತಿ ಜೀಣೋದ್ಧಾರ ಮಾಡಿದ್ದರು .