ಪಂಜಾಬ್ ತಂಡದ ‘ಕಿಂಗ್’​ ಆಗಲ್ವಾ ಧವನ್..? ಕುಂಬ್ಳೆ ಕಣ್ಣು ಯಾರ ಮೇಲಿದೆ ಗೊತ್ತಾ..?


ಐಪಿಎಲ್​ ಹರಾಜು ಮುಗಿದ ಬೆನ್ನಲ್ಲೇ ಪಂಜಾಬ್​ ಕಿಂಗ್ಸ್​ ತಂಡದ ನಾಯಕತ್ವದ ಗೊಂದಲ ಬಗೆ ಹರಿತು ಎಂಬ ಮಾತುಗಳು ಕೇಳಿ ಬಂದಿದ್ವು. ಆದ್ರೆ, ಮುಂದಿನ ಕ್ಯಾಪ್ಟನ್​ ವಿಚಾರದಲ್ಲಿ ಪಂಜಾಬ್​ ಪಡೆ ಇನ್ನೂ ಸ್ಪಷ್ಟತೆಗೆ ಬಂದಿಲ್ಲ.

ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು ಮುಗಿದು ವಾರವೇ ಉರುಳಿದೆ. ಹರಾಜಿನ ಬಳಿಕ ತಂಡದ ಬಲ ಹಾಗೂ ದೌರ್ಭಲ್ಯಗಳ ಮೇಲೆ ಫ್ರಾಂಚೈಸಿಗಳು ವರ್ಕೌಟ್​ ಮಾಡೋಕೆ ಆರಂಭಿಸಿವೆ. ತಂಡದಲ್ಲಿನ ಗೊಂದಲಗಳನ್ನ ಬಗೆಹರಿಸಿಕೊಂಡು ಐಪಿಎಲ್​ 15 ಸೀಸನ್​ಗೆ ಸಿದ್ಧತೆ ಈಗಾಗಲೇ ಗ್ರೌಂಡ್​​​ ಲೆವೆಲ್​ನಲ್ಲಿ ಆರಂಭವಾಗಿವೆ. ಆದ್ರೆ, ಪಂಜಾಬ್​ ಕಿಂಗ್ಸ್​​ ತಂಡ ಮಾತ್ರ ನಾಯಕನ್ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಾಟದಲ್ಲಿ ಬ್ಯುಸಿಯಾಗಿದೆ.

ನಾಯಕತ್ವದ ವಿಚಾರದಲ್ಲಿ ಪಂಜಾಬ್​ ಫ್ರಾಂಚೈಸಿಯ ಯೂ ಟರ್ನ್​..!
ಐಪಿಎಲ್​ ಮೆಗಾ ಹರಾಜು ಹತ್ತಿರವಾದಂತೆ ಪಂಜಾಬ್​ನ ರಾಜ ಯಾರು ಎಂಬ ಪ್ರಶ್ನೆ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಹರಾಜಿಗೆ ಮುನ್ನ ಫ್ರಾಂಚೈಸಿ ನಾವು ನಾಯಕನ ಹುಡುಕಾಟದಲ್ಲಿವೆ ಎಂದು ಫ್ರಾಂಚೈಸಿ ಮೂಲಗಳು ಹೇಳಿಕೆ ನೀಡಿದ್ವು. ಅದರ ಬೆನ್ನಲ್ಲೇ ಹರಾಜಿಗೂ ಮುನ್ನ ರಿಟೈನ್​ ಮಾಡಿಕೊಂಡ ಮಯಾಂಕ್​ ಅಗರ್​ವಾಲ್​ಗೆ ನಾಯಕತ್ವ ಸಿಗಲ್ವಾ ಎಂಬ ಪ್ರಶ್ನೆ ಹುಟ್ಟಿತ್ತು. ಇದಕ್ಕೆ ತಂಡದ ಮೂಲಗಳೇ ಮಯಾಂಕ್​ ಮೊದಲ ಆಯ್ಕೆಯಲ್ಲ ಎಂಬ ಉತ್ತರ ನೀಡಿದ್ವು. ಆದ್ರೀಗ ಫ್ರಾಂಚೈಸಿ ಯೂಟರ್ನ್​ ತೆಗೆದುಕೊಂಡಿದ್ಯಂತೆ.

ಹರಾಜಿನಲ್ಲಿ ಶಿಖರ್​ ಧವನ್​ರನ್ನ ತಂಡ ಖರೀದಿ ಮಾಡಿದ ಬೆನ್ನಲ್ಲೇ ಗಬ್ಬರ್​​ಗೆ ಪಂಜಾಬ್ ​ ಕ್ಯಾಪ್ಟನ್​ ಪಟ್ಟ ಕಟ್ಟಲಾಗುತ್ತೆ ಅನ್ನೋ ಗುಲ್​ ಎದ್ದಿತ್ತು. ಇದೀಗ ಮತ್ತೆ ಫ್ರಾಂಚೈಸಿ ಯೂಟರ್ನ್​ ತೆಗೆದುಕೊಂಡಿದೆ. ರಿಟೈನ್​ ಮಾಡಿಕೊಂಡಿರುವ ಕನ್ನಡಿಗ ಮಯಾಂಕ್​ ಅಗರ್​ವಾಲ್​ಗೆ ನಾಯಕನ ಪಟ್ಟ ಕಟ್ಟೋ ಬಗ್ಗೆ ಫ್ರಾಂಚೈಸಿ ಒಲವು ತೋರಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಮಯಾಂಕ್​ಗೆ ನಾಯಕತ್ವ ನೀಡೋ ನಿರ್ಧಾರದ ಹಿಂದೆ​ ಕುಂಬ್ಳೆ?
ಹೌದು..! ಕಳೆದ ಆವೃತ್ತಿಯಲ್ಲಿ ಕೆಎಲ್​ ರಾಹುಲ್​ ಅಲಭ್ಯರಾದ ಪಂದ್ಯದಲ್ಲಿ ಮಯಾಂಕ್​ ಪಂಜಾಬ್​ ಪಡೆಯನ್ನ ಮುನ್ನಡೆಸಿದ್ರು. ಪಂದ್ಯದಲ್ಲಿ ಪಂಜಾಬ್​ ಗೆಲ್ಲದಿದ್ರೂ, ಮಯಾಂಕ್​, ಸ್ಮಾರ್ಟ್​ ನಾಯಕತ್ವ ಗಮನ ಸೆಳೆದಿತ್ತು. ಇದರ ಜೊತೆಗೆ ತಂಡದ ಹೆಡ್​ ಕೋಚ್​ ಅನಿಲ್​ ಕುಂಬ್ಳೆ ಜೊತೆಗೂ ಮಯಾಂಕ್​ ಉತ್ತಮ ಸಂಬಂಧ ಹೊಂದಿದ್ದಾರೆ. ಇವರಿಬ್ಬರ rapo ಕೂಡ ಸಖತ್​ ಆಗಿದೆ. ನಾಯಕ – ಕೋಚ್​ ನಡುವೆ ಸಮನ್ವಯತೆ ಇದ್ರೆ, ತಂಡ ಯಶಸ್ಸು ಕಾಣುತ್ತೆ ಅನ್ನೋದನ್ನ ಫ್ರಾಂಚೈಸಿ ಕೂಡ ಅರಿತಿದೆ. ಈ 2 ಕಾರಣಗಳಿಂದಲೇ ಮಯಾಂಕ್​ ನಾಯಕತ್ವದ ಹೊಣೆಗಾರಿಕೆ ನೀಡೋ ನಿರ್ಧಾರಕ್ಕೆ ಪಂಜಾಬ್​ ಪಡೆ ಬಂದಿರೋದು.

ಪಂಜಾಬ್​ ಪಡೆ ಕೊನೆಯದಾಗಿ ಫೈನಲ್​ ಪ್ರವೇಶಿಸಿದ್ದೇ 2014ರಲ್ಲಿ. ಕಳೆದ ಮೂರು ವರ್ಷಗಳಿಂದ ಅಂತೂ ಹೀನಾಯ ಪ್ರದರ್ಶನವನ್ನ ನೀಡಿದೆ. ಈ ಆವೃತ್ತಿಯಲ್ಲಿ ಬ್ಯಾಡ್​​ ರೆಕಾರ್ಡ್​ ಬ್ರೇಕ್​ ಮಾಡ್ಬೇಕು ಅನ್ನೋದು ಫ್ರಾಂಚೈಸಿಯ ಟಾರ್ಗೆಟ್​​ ಆಗಿದೆ. ಹೀಗಾಗಿಯೇ ಅಳೆದು ತೂಗಿ ಹರಾಜಿನಲ್ಲಿ ಬೆಸ್ಟ್​ ಪಿಕ್​ ಮಾಡಿರೋ ತಂಡ ಈಗ ನಾಯಕನ ವಿಚಾರದಲ್ಲೂ ಕಾದು ನೋಡೋ ತಂತ್ರ ಅನುಸರಿಸ್ತಾಯಿದೆ.

News First Live Kannada


Leave a Reply

Your email address will not be published. Required fields are marked *