ಭಾರತ ತಂಡದಲ್ಲಿ ಅವಕಾಶ ಪಡೆಯುವುದು ಅಷ್ಟು ಸುಲಭವಲ್ಲ. ಚಾನ್ಸ್ ಸಿಕ್ಕ ಮೇಲೆ, ಮಿಂಚದಿದ್ರೆ ತಂಡದಲ್ಲಿ ಜಾಗವಿಲ್ಲ. ಆದ್ರೆ ಕೆಲ ಆಟಗಾರರು ಸಿಕ್ಕ ಅವಕಾಶಗಳಲ್ಲಿ ಭರ್ಜರಿಯಾಗಿ ಶೈನ್ ಆಗ್ತಾ ಸೀನಿಯರ್ ಆಟಗಾರರಿಗೆ ವಿಲನ್ ಆಗಿ ಕಾಡ್ತಿದ್ದಾರೆ ವೆಂಕಟೇಶ್ ಅಯ್ಯರ್.
ಐಪಿಎಲ್ನಲ್ಲಿ ಅಬ್ಬರಿಸದಿದ್ದರೇ, ಪಾಂಡ್ಯ ಸ್ಥಾನಕ್ಕೆ ಕುತ್ತು
ಇಂಜುರಿಯಿಂದ ಹಾರ್ದಿಕ್, ಕೆಲ ಸರಣಿಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. ಬ್ಯಾಟ್ಸ್ಮನ್ ಆಗಿ ಮಾತ್ರ ತಂಡಕ್ಕೆ ತಮ್ಮ ಕೊಡುಗೆ ನೀಡಿದರಷ್ಟೆ. ಇದರಿಂದ ತಂಡಕ್ಕೆ ಫರ್ಫೆಕ್ಟ್ ಆಲ್ರೌಂಡರ್ ಕೊರತೆ ಕಾಡಿತು. ಆದ್ರೆ ವಿಂಡೀಸ್ ಟಿ20 ಸರಣಿಯಲ್ಲಿ ವೆಂಕಟೇಶ್ ಅಯ್ಯರ್ ಸಾಲಿಡ್ ಫರ್ಫಾಮೆನ್ಸ್ ಮೂಲಕ ಮುಂಬರೋ ಟಿ20 ವಿಶ್ವಕಪ್ಗೆ ಸ್ಟ್ರಾಂಗ್ ಕಟೆಂಡರ್ ಆಗಿ ಹೊರಹೊಮ್ಮಿದ್ದಾರೆ. ಹಾಗಾಗಿ ಈ ಬಾರಿ ಐಪಿಎಲ್ನಲ್ಲಿ ಹಾರ್ದಿಕ್ ಅಬ್ಬರಿಸೋದು ಅನಿವಾರ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹಾರ್ದಿಕ್ಗೆ IPL ಬಹಳ ಮುಖ್ಯ
‘ಸದ್ಯದ ಪರಿಸ್ಥಿತಿಯಲ್ಲಿ ಟಿ20 ವಿಶ್ವಕಪ್ ರೇಸ್ನಲ್ಲಿ ಅಯ್ಯರ್ ಪಾಂಡ್ಯಗಿಂತ ಮುಂದಿದ್ದಾರೆ ಅನ್ನೋದ ನನ್ನ ಭಾವನೆ. ಯಾಕೆಂದ್ರೆ ಪಾಂಡ್ಯ ಬೌಲಿಂಗ್ ಮಾಡುವಷ್ಟು ಫಿಟ್ ಆಗಿದ್ದಾರೋ, ಇಲ್ವೋ ಅನ್ನೋದು ಗೊತ್ತಿಲ್ಲ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯೋ ವಿಚಾರದಲ್ಲಿ IPLನಲ್ಲಿ ಹಾರ್ದಿಕ್ ಪ್ರದರ್ಶನ ಪ್ರಮುಖ ಪಾತ್ರವಹಿಸಲಿದೆ’
ವಾಸೀಂ ಜಾಫರ್, ಮಾಜಿ ಕ್ರಿಕೆಟಿಗ
The post ಪಾಂಡ್ಯರ ನಿದ್ರೆಗೆಡಿಸಿದ ಅಯ್ಯರ್; ಹಾರ್ದಿಕ್ಗೆ ಉಳಿದಿರುವ ಕೊನೆಯ ಆಯ್ಕೆ ಏನು ಗೊತ್ತಾ..? appeared first on News First Kannada.